ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ಗೆ ಹುಟ್ಟಲಿದೆ ‘ಅಖಿಲ ಭಾರತ ಜನತಾ ದಳ’

By Staff
|
Google Oneindia Kannada News

ಬೆಂಗಳೂರು : ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ತಿಕ್ಕಾಟದ ನಡುವೆಯೂ ಜನತಾ ದಳದ ಉಭಯ ಬಣಗಳ ತಟಸ್ಥ ಮುಖಂಡರು ‘ಅಖಿಲ ಭಾರತ ಜನತಾ ದಳ’ ಎಂಬ ಹೊಸ ಪಕ್ಷವನ್ನು ಕಟ್ಟುವ ಸಂಕಲ್ಪ ತೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿಯವರನ್ನು ಈ ಫಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡಲು ನಿರ್ಧರಿಸಲಾಗಿದೆ.

ಜನತಾ ದಳ ತಟಸ್ಥ ನಾಯಕ ಎಂ.ಪಿ.ಪ್ರಕಾಶ್‌ ಮನೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರನ್ನು ಹೊರತುಪಡಿಸಿ ಸಂಯುಕ್ತ ಹಾಗೂ ಜಾತ್ಯತೀತ ಜನತಾ ದಳದ ಬಹುತೇಕ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಎಂ.ಪಿ.ಪ್ರಕಾಶ್‌, ಪಿ.ಜಿ.ಆರ್‌. ಸಿಂಧ್ಯ, ವಿ.ಎಸ್‌.ಕೃಷ್ಣಯ್ಯರ್‌, ಕೆ.ಎಚ್‌.ಶ್ರೀನಿವಾಸ್‌, ಬಸವರಾಜ ಹೊರಟ್ಟಿ ಮೊದಲಾದ ನಾಯಕರು ಸಭೆಯಲ್ಲಿ ಹಾಜರಿದ್ದರು. ಡಿಸೆಂಬರ್‌ ತಿಂಗಳಲ್ಲೇ ಹೊಸ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಪ್ರಕಾಶ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X