ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು ಸಹಕಾರಿಬ್ಯಾಂಕ್ನಲ್ಲಿ ಭಾರೀ ಕೊಳ್ಳೆ
ಮಂಗಳೂರು : ಡಕಾಯಿತರ ತಂಡವೊಂದು ಕಾಟಿಪಳ್ಳದ ಸಹಕಾರಿ ಬ್ಯಾಂಕೊಂದರಲ್ಲಿ 1.35 ಕೋಟಿ ರು. ಬೆಲೆಯ ಚಿನ್ನಾಭರಣ ಮತ್ತು 6 ಲಕ್ಷ ರುಪಾಯಿ ನಗದನ್ನು ದೋಚಿ ಪರಾರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸೆಂಟ್ರಲ್ ಬ್ಯಾಂಕ್ (ಎಸ್ಸಿಡಿಸಿಸಿ) ನ ಛಾವಣಿಗೇ ಕನ್ನ ಹಾಕಿ, ಒಳನುಗ್ಗಿ ತಿಜೋರಿಯನ್ನು ಒಡೆದು ಈ ಕೃತ್ಯ ಎಸಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಮಂಜುನಾಥ ಅಣ್ಣಿಗೇರಿ ಸೋಮವಾರ ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಬ್ಯಾಂಕಿಗೆ ರಜವಿತ್ತು. ಸೋಮವಾರ ಬೆಳಗ್ಗೆ ಮಾಮೂಲಿನಂತೆ ಅಟೆಂಡರ್ ಒಬ್ಬ ಬಾಗಿಲು ತೆಗೆದಾಗಲೇ ಅವಘಡ ಗಮನಕ್ಕೆ ಬಂದಿದ್ದು. ದೋಚಿರುವ ಲಾಕರ್ಗಳ ಬಳಿ 25 ನೀರಿನ ಟಿನ್ಗಳು ಮತ್ತು ರಬ್ಬರ್ ಶೀಟುಗಳು, ಒಂದು ಜೊತೆ ಕೈ ಕವಚ ಇದ್ದ ಕೈಚೀಲ ಮತ್ತು ಕೆಲವು ತಮಿಳು ನಿಯತಕಾಲಿಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಡಕಾಯಿತರ ಪತ್ತೆಗೆ ಶ್ವಾನದಳ ಈಗಾಗಲೇ ಕಾರ್ಯನಿರತವಾಗಿದೆ. ಆದರೆ, ಈವರೆಗೂ ದರೋಡೆಕೋರರ ಸುಳಿವು ಸಿಕ್ಕಿಲ್ಲ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, November 25, 2002, 5:30 [IST]