ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರಾವಳಿಯ ಕುಖ್ಯಾತ ರೌಡಿ ಹರೀಶ್ ಬಂಧನ
ಉಡುಪಿ: ದಕ್ಷಿಣ ಕನ್ನಡ, ಮಡಿಕೇರಿ, ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕುಖ್ಯಾತಿಗಳಿಸಿದ್ದ ರೌಡಿ ಕೊಕೇನ್ ಹರೀಶ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ಹಲ್ಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತ ಈ ಹಿಂದೆ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದ. ಹಲವು ಭೂಗತ ರೌಡಿಗಳ ಜೊತೆಗೆ ಸಂಬಂಧ ಇರಿಸಿಕೊಂಡಿದ್ದ ಹರೀಶನನ್ನು ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಪಿ. ಹರೀಶ್ಚಂದ್ರ ಮತ್ತವರ ಸಿಬ್ಬಂದಿ ಶುಕ್ರವಾರ ಕೊಕ್ಕರ್ಣೆ ಕಾಡಿನ ಕೊಟ್ಟಿಗೆ ಎಂಬಲ್ಲಿ ಬಂಧಿಸಿದ್ದಾರೆ.
ಈತ ಕೊಕ್ಕರ್ಣೆ ಹರೀಶ ಎಂದೂ ಗುರುತಿಸಿಕೊಂಡಿದ್ದ. ಒಟ್ಟು 9 ಆರೋಪಗಳು ಈತನ ಮೇಲೆ ದಾಖಲಾಗಿವೆ. ಮಡಿಕೇರಿ ಠಾಣೆಯ ಕುಖ್ಯಾತ ರೌಡಿಗಳ ಪಟ್ಟಿಯಲ್ಲಿ ಹರೀಶನ ಹೆಸರಿದೆ. ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಗೂಂಡಾನಾಗಿ ಹರೀಶ್ ಕೆಲಸ ನಿರ್ವಹಿಸುತ್ತಿದ್ದು, ಮಡಿಕೇರಿಯಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಈತ ತಲೆ ಮರೆಸಿಕೊಂಡಿದ್ದ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, November 23, 2002, 5:30 [IST]