ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಗಪ್ಪ ಸುರಕ್ಷಿತ ಬಿಡುಗಡೆಗೆ ಕ್ರಮ: ಕೃಷ್ಣ ಅಭಯ
ಬೆಂಗಳೂರು : ವೀರಪ್ಪನ್ ಸೆರೆಯಿಂದ ಮಾಜಿ ಸಚಿವ ನಾಗಪ್ಪನವರ ಸುರಕ್ಷಿತ ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಪರಿಮಳಾ ನಾಗಪ್ಪನವರಿಗೆ ಭರವಸೆ ನೀಡಿದ್ದಾರೆ.
ಹನ್ನೆರಡು ದಿನಗಳ ಗಡುವಿನೊಳಗೆ ಕೊಳತ್ತೂರು ಮಣಿಯನ್ನು ಸಂಧಾನಕ್ಕೆ ಕಳುಹಿಸದಿದ್ದರೆ ನಾಗಪ್ಪನವರನ್ನು ಹತ್ಯೆ ಮಾಡಲಾಗುವುದು ಎನ್ನುವ ವೀರಪ್ಪನ್ ಬೆದರಿಕೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಅವರನ್ನು ನಾಗಪ್ಪನವರ ಕುಟುಂಬ ಭೇಟಿ ಮಾಡಿದಾಗ ಈ ಭರವಸೆ ನೀಡಲಾಯಿತು. ವೀರಪ್ಪನ್ನಿಂದ ಬಂದ 5 ನೇ ಕೆಸೆಟ್ಟನ್ನು ನಾಗಪ್ಪನವರ ಕುಟುಂಬ ಗುರುವಾರ ಸರ್ಕಾರಕ್ಕೆ ಒಪ್ಪಿಸಿತ್ತು.
ನಾಗಪ್ಪನವರ ಪತ್ನಿ ಪರಿಮಳಾ, ಪುತ್ರಿ, ಪುತ್ರ ಹಾಗೂ ಅಳಿಯನನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ನಾಗಪ್ಪನವರ ಬಿಡುಗಡೆಗೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
(ಏಜೆನ್ಸೀಸ್)
ಮುಖಪುಟ / ವೀರಪ್ಪನ್ ಶಿಕಾರಿ
Comments
Story first published: Friday, November 22, 2002, 5:30 [IST]