ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುಪ್ರಿಂಕೋರ್ಟ್ ಕಾವೇರಿ ವಿಚಾರಣೆ ಡಿಸೆಂಬರ್ 5 ಕ್ಕೆ
ನವದೆಹಲಿ : ನವಂಬರ್ 29 ರ ಕಾವೇರಿ ಪ್ರಾಧಿಕಾರದ ಸಭೆ ಫಲಪ್ರದಗೊಳ್ಳುವ ಕುರಿತು ಆಶಾಭಾವನೆ ವ್ಯಕ್ತಪಡಿಸಿರುವ ಸುಪ್ರಿಂಕೋರ್ಟ್ನ ನ್ಯಾಯಪೀಠ ಕಾವೇರಿ ವಿಚಾರಣೆಯನ್ನು ಡಿಸೆಂಬರ್ 5 ಕ್ಕೆ ಮುಂದೂಡಿದೆ.
ನವಂಬರ್ 25 ರಂದು ಕಾವೇರಿ ಉಸ್ತುವಾರಿ ಸಮಿತಿ ಸಭೆ ಹಾಗೂ ನ.29 ರಂದು ಪ್ರಧಾನಿ ವಾಜಪೇಯಿ ನೇತೃತ್ವದ ಕಾವೇರಿ ಪ್ರಾಧಿಕಾರದ ಸಭೆ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದರಿಂದ, ಶುಕ್ರವಾರ ಕಾವೇರಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಜಿ.ಬಿ.ಪಟ್ನಾಯಕ್ ನೇತೃತ್ವದ ತ್ರಿಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ಡಿಸೆಂಬರ್ 5 ರಂದು ನಡೆಸಲು ನಿರ್ಧರಿಸಿತು. ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ಹಾಗೂ ನ್ಯಾಯಮೂರ್ತಿ ಅರಿಜಿತ್ ಪಸ್ಯತ್ ತ್ರಿಸದಸ್ಯ ನ್ಯಾಯಪೀಠದಲ್ಲಿನ ಇತರ ಇಬ್ಬರು ಸದಸ್ಯರು.
(ಏಜೆನ್ಸೀಸ್)
ಮುಖಪುಟ / ಕಾವೇರಿ ಕನ್ನಡಿ
Story first published: Friday, November 22, 2002, 5:30 [IST]