ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರಿಂಕೋರ್ಟ್‌ ಕಾವೇರಿ ವಿಚಾರಣೆ ಡಿಸೆಂಬರ್‌ 5 ಕ್ಕೆ

By Staff
|
Google Oneindia Kannada News

ನವದೆಹಲಿ : ನವಂಬರ್‌ 29 ರ ಕಾವೇರಿ ಪ್ರಾಧಿಕಾರದ ಸಭೆ ಫಲಪ್ರದಗೊಳ್ಳುವ ಕುರಿತು ಆಶಾಭಾವನೆ ವ್ಯಕ್ತಪಡಿಸಿರುವ ಸುಪ್ರಿಂಕೋರ್ಟ್‌ನ ನ್ಯಾಯಪೀಠ ಕಾವೇರಿ ವಿಚಾರಣೆಯನ್ನು ಡಿಸೆಂಬರ್‌ 5 ಕ್ಕೆ ಮುಂದೂಡಿದೆ.

ನವಂಬರ್‌ 25 ರಂದು ಕಾವೇರಿ ಉಸ್ತುವಾರಿ ಸಮಿತಿ ಸಭೆ ಹಾಗೂ ನ.29 ರಂದು ಪ್ರಧಾನಿ ವಾಜಪೇಯಿ ನೇತೃತ್ವದ ಕಾವೇರಿ ಪ್ರಾಧಿಕಾರದ ಸಭೆ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದರಿಂದ, ಶುಕ್ರವಾರ ಕಾವೇರಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಜಿ.ಬಿ.ಪಟ್ನಾಯಕ್‌ ನೇತೃತ್ವದ ತ್ರಿಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 5 ರಂದು ನಡೆಸಲು ನಿರ್ಧರಿಸಿತು. ನ್ಯಾಯಮೂರ್ತಿ ವೈ.ಕೆ.ಸಬರ್‌ವಾಲ್‌ ಹಾಗೂ ನ್ಯಾಯಮೂರ್ತಿ ಅರಿಜಿತ್‌ ಪಸ್ಯತ್‌ ತ್ರಿಸದಸ್ಯ ನ್ಯಾಯಪೀಠದಲ್ಲಿನ ಇತರ ಇಬ್ಬರು ಸದಸ್ಯರು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಾವೇರಿ ಪ್ರಾಧಿಕಾರ ಹಾಗೂ ಪ್ರಧಾನಿ ಕುರಿತು ವಿಶ್ವಾಸ ವ್ಯಕ್ತಪಡಿಸಿ ಪ್ರಧಾನಮಂತ್ರಿ ವಾಜಪೇಯಿ ಅವರಿಗೆ ಬರೆದ ಪತ್ರದ ಕುರಿತು, ಕೋರ್ಟ್‌ ಕಲಾಪ ಆರಂಭವಾದ ಪ್ರಾರಂಭದಲ್ಲೇ ತಮಿಳುನಾಡು ಪರ ವಕೀಲ ಕೆ.ಕೆ.ವೇಣುಗೋಪಾಲ್‌ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ಪ್ರಾಧಿಕಾರದ ಕುರಿತು ಟೀಕಿಸಿರುವ ಜಯಲಲಿತಾ ಅವರ ನಡವಳಿಕೆ ಬಗೆಗೆ ಕಳೆದ ವಿಚಾರಣೆಯಲ್ಲಿ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

(ಏಜೆನ್ಸೀಸ್‌)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X