ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡುವು ನೀಡಿ ಸಾಕಾಗಿದೆ...5ನೇ ಕ್ಯಾಸೆಟ್‌ನಲ್ಲಿ ವೀರಪ್ಪನ್‌

By Staff
|
Google Oneindia Kannada News

ಬೆಂಗಳೂರು : ಮಾಜಿ ಸಚಿವ ನಾಗಪ್ಪ ಅವರನ್ನು ಒತ್ತೆಯಲ್ಲಿಟ್ಟುಕೊಂಡಿರುವ ನರಹಂತಕ ವೀರಪ್ಪನ್‌ ಐದನೇ ಕ್ಯಾಸೆಟ್‌ ಕಳುಹಿಸಿದ್ದಾನೆ. ಕೊಳತ್ತೂರು ಮಣಿಯನ್ನು ಇನ್ನು 12 ದಿನಗಳೊಳಗೆ ಸಂಧಾನಕ್ಕಾಗಿ ಕಳುಹಿಸದೇ ಇದ್ದರೆ ನಾಗಪ್ಪ ಅವರನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ.

ಉಗ್ರ ಸಂದೇಶವನ್ನು ಹೊತ್ತ ಕ್ಯಾಸೆಟ್‌ನ್ನು ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಸದಸ್ಯ ನಾಗೇಂದ್ರ ಅವರಿಗೆ ವೀರಪ್ಪನ್‌ ಗುರುವಾರ ಬೆಳಗ್ಗೆ ಕಳುಹಿಸಿದ್ದಾನೆ. ಈ ಕ್ಯಾಸೆಟ್‌ ನಾಗಪ್ಪ ಅವರ ಅಳಿಯ ಡಾ. ಕಿರಣ್‌ ಅವರ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಕೆ. ಚಂದ್ರಶೇಖರ್‌ ಅವರನ್ನು ತಲುಪಿದೆ.

ಕ್ಯಾಸೆಟ್‌ನಲ್ಲಿ ಕೊಳತ್ತೂರು ಮಣಿಯನ್ನೇ ಸಂಧಾನಕ್ಕೆ ಕಳುಹಿಸಬೇಕು ಎಂದು ಪಟ್ಟು ಹಿಡಿದಿರುವ ವೀರಪ್ಪನ್‌ ಎತ್ತಿರುವ ಪ್ರಶ್ನೆಗಳು-

  • ಕಂದಾಹಾರ್‌ ಉಗ್ರಗಾಮಿಗಳು ಭಾರತದ ವಿಮಾನ ಹಾರಿಸಿದಾಗ ಸೆರೆಮನೆಯಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಏನೂ ತಪ್ಪು ಮಾಡದ ಮಣಿಯನ್ನು ಯಾಕೆ ಬಿಡುಗಡೆ ಮಾಡಬಾರದು ?
  • ನಿಮ್ಮ ಫಾರೆಸ್ಟ್‌ ಗಾರ್ಡ್‌ ಸಂತೋಷ್‌ ಕುಮಾರ್‌ನದ್ದು ಅತಿಯಾಯ್ತು. ನನ್ನ ಚಲನವಲನಗಳ ಬಗ್ಗೆ ಆತ ತಮಿಳನಾಡು ಎಸ್‌ಟಿಎಫ್‌ಗೆ ಮಾಹಿತಿ ನೀಡುತ್ತಿದ್ದಾನೆ. ಆತನನ್ನು ಮುಗಿಸ್ತೇನೆ.
  • ಎಸ್‌ಟಿಎಫ್‌ ಕಾರ್ಯಾಚಾರಣೆ ನಿಂತಿರುವುದನ್ನು ತಿಳಿದು, ಎಕೆ-47 ರೈಫಲ್‌ ಕೊಟ್ಟರೆ ತಾನೇ ವೀರಪ್ಪನ್‌ನ್ನು ಮುಗಿಸುವುದಾಗಿ ಸಂತೋಷ್‌ ಹೇಳಿದ್ದಾನಂತೆ.
  • ಗಡುವು ನೀಡಿ ನೀಡಿ ಸಾಕಾಗಿದೆ. ಈ ಬಾರಿ ಗಡುವು ಮೀರಿದಲ್ಲಿ ನೀವು ದುಃಖಪಡಬೇಕಾಗುತ್ತದೆ.
(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X