ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಕೋಮುಗಲಭೆ, 7 ಬಂಧನ
ಹುಬ್ಬಳ್ಳಿ : ಭಾರತ ಹಿಂದೂರಾಷ್ಟ್ರ ಆಗಬೇಕೆ ಬೇಡವೆ ಎನ್ನುವ ಪರ ವಿರೋಧ ವಾದಗಳು ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿರುವ ಸಂದರ್ಭದಲ್ಲಿ , ಇತ್ತ ಹುಬ್ಬಳ್ಳಿಯ ಪೆಂಡರಗಲ್ಲಿಯಲ್ಲಿ ಕೋಮು ಗಲಭೆ ಭುಗಿಲೆದ್ದಿದೆ.
ಹುಬ್ಬಳ್ಳಿ ನಗರದ ಹೃದಯಭಾಗವಾದ ಪೆಂಡರಗಲ್ಲಿಯಲ್ಲಿ ಬುಧವಾರ (ನ.20) ಭುಗಿಲೆದ್ದ ಕೋಮುಘರ್ಷಣೆಯನ್ನು ಹತ್ತಿಕ್ಕಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದ್ದಾರೆ. ಪ್ರಾರ್ಥನೆಯಲ್ಲಿ ತೊಡಗಿದ್ದ ಒಂದು ಸಮುದಾಯದವರನ್ನು ಇನ್ನೊಂದು ಸಮುದಾಯದ ಕೆಲವರು ಕಿಚಾಯಿಸಿದ್ದೇ ಗಲಭೆಗೆ ಕಾರಣ ಎಂದು ಸಹಾಯಕ ಪೊಲೀಸ್ ಕಮೀಷನರ್ ರವಿಕಾಂತ್ ಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎರಡೂ ಗುಂಪುಗಳು ಕಲ್ಲು ತೂರಾಟದಲ್ಲಿ ತೊಡಗಿ ಬಿಗಡಾಯಿಸಿದ ಪರಿಸ್ಥಿತಿಯನ್ನು ತಹಬಂದಿಗೆ ತರಲು ನಡೆಸಿದ ಬೆತ್ತ ಪ್ರಹಾರ ಯಶಸ್ವಿಯಾಗದಿದ್ದಾಗ, ಐದು ಸುತ್ತು ಅಶ್ರುವಾಯು ಸಿಡಿಸಬೇಕಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿದ್ದು , ಗಲಭೆಗೆ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ರವಿಕಾಂತ್ ಗೌಡ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...