ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಂಟೂರಲ್ಲಿ ನಕ್ಸಲೈಟರಿಂದ ರೈಲು ನಿಲ್ದಾಣ ಸ್ಫೋಟ
ಹೈದರಾಬಾದ್ : ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲ್ಯುಜಿ) ನ ನಕ್ಸಲೈಟರು ಬುಧವಾರ ಮೊದಲ ಜಾವ ಗುಂಟೂರು ಬಳಿಯ ತುಮ್ಮಳ್ಚೆರ್ವು ರೈಲ್ವೆ ನಿಲ್ದಾಣವನ್ನು ಸ್ಫೋಟಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಸಾವಿನ ವರದಿ ಹೊರಬಿದ್ದಿಲ್ಲ.
ಬುಧವಾರ ಬೆಳಗಿನ ಜಾವ ಬೆಳಗ್ಗೆ 2 ಗಂಟೆಯ ಸುಮಾರಿನಲ್ಲಿ ಪುದಗುರಲ್ಲು ಮತ್ತು ನದಿಕುಡಿ ನಡುವೆ ಇರುವ ರೈಲು ನಿಲ್ದಾಣಕ್ಕೆ ನಕ್ಸಲೈಟರು ನುಗ್ಗಿದ್ದಾರೆ. ಕರಾಂಪುಡಿಯಲ್ಲಿನ ಎಂಆರ್ಓ ಕಚೇರಿಯಲ್ಲಿನ ಸಿಬ್ಬಂದಿಯನ್ನು ಬಲವಂತವಾಗಿ ಹೊರಗಟ್ಟಿ, ಕಟ್ಟಡವನ್ನು ಸ್ಫೋಟಿಸಿದ್ದಾರೆ. ಕಟ್ಟಡ ಪ್ರತಿಶತ 70ರಷ್ಟು ಹಾಳಾಗಿದೆ. ಇತ್ತೀಚೆಗೆ ಚೆಂದರಾಜುಪಲೆಂ ಎನ್ಕೌಂಟರ್ನಲ್ಲಿ ನಕ್ಸಲೈಟರನ್ನು ಪೊಲೀಸರು ಮುಗಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ನಕ್ಸಲೈಟರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಈ ಘಟನೆಯ ಕಾರಣ ಗುಂಟೂರಿಗೆ ಬರುವ ರೈಲುಗಳನ್ನು ಖಾಳಿಪೇಟ್ ಮತ್ತು ವಿಜಯವಾಡ ಕಡೆಗೆ ತಿರುಗಿಸಲಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, November 20, 2002, 5:30 [IST]