ಬೀದರ್ನ ತ್ರಿಪಾಟಿಗೆ ಫುಲೆ ಫೆಲೋಶಿಪ್
ಬೀದರ್: ದಲಿತ ಜನಾಂಗದ ಏಳಿಗೆಗೆ ಶ್ರಮಿಸಿದವರನ್ನು ಗುರುತಿಸಿ ಭಾರತೀಯ ದಲಿತ ಸಾಹಿತ್ಯ ಸಂಘಟನೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದೆ.
ಬೀದರ್ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಜಗನ್ನಾಥ ತ್ರಿಪಾಟಿ ಅವರಿಗೆ ಮಾಹತ್ಮಾ ಜ್ಯೋತಿ ಫುಲೆ ಫೆಲೋಶಿಪ್ಗಾಗಿ ಆಯ್ಕೆ ಮಾಡಲಾಗಿದೆ. ತ್ರಿಪಾಟಿ ಅವರು ಪ್ರಸ್ತುತ ಬೀದರ್ ಸಾರ್ವಜನಿಕ ಶಿಕ್ಷಣ ಇಲಾಖೆಯವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದವರು - ದಲಿತ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಸುನಾರ ವಿಶ್ವನಾಥ ಅವರಿಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ ವಿಶಿಷ್ಟ ಸೇವಾ ಪುರಸ್ಕಾರ, ಹಾಗೂ ಪ್ರಸಿದ್ಧ ಶಿಕ್ಷಣ ತಜ್ಞ ಜಯಶೀಲಾ ಅವರಿಗೆ ವೀರಾಂಗಿಣಿ ಸಾವಿತ್ರಿ ಬಾಯಿ ಫುಲೆ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ತಿಂಗಳ 26 ಮತ್ತು 27ರಂದು ದೆಹಲಿಯಲ್ಲಿ ನಡೆಯುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ನ ಅಧ್ಯಕ್ಷ ಚಂದ್ರಕಾಂತ ಪೋಸ್ತೆ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...