ಬರುವ ಸೀಸನ್ನಿಂದ ಶಬರಿಮಲೆಯಲ್ಲಿ ಉಚಿತ ಊಟ
ಪಥನಂತಿಟ್ಟ : ತಿರುಪತಿ ಮತ್ತು ಧರ್ಮಸ್ಥಳ ದೇವಳಗಳಂತೆ ಶಬರಿಮಲೆ ಅ್ಯಪ್ಪನ ಸನ್ನಿಧಿಯಲ್ಲೂ ಉಚಿತ ಊಟವನ್ನು ಬರುವ ಸೀಸನ್ನಿನಿಂದ ಉಣ ಬಡಿಸಲು ತಿರುವಾಂಕೂರು ದೇವಸ್ವಾಮಿ ಮಂಡಳಿ ನಿರ್ಧರಿಸಿದೆ.
ಮಂಡಳಿಯ ಅಧ್ಯಕ್ಷ ಎನ್.ಬಾಬು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಯ್ಯಪ್ಪ ಸ್ವಾಮಿಯ ಭಕ್ತರ ಪೈಕಿ ಪ್ರತಿಶತ 80 ಮಂದಿ ಕೆಳ ಮಧ್ಯಮ ಹಾಗೂ ಬಡವರಾಗಿರುತ್ತಾರೆ. ಅಯ್ಯಪ್ಪ ಕೂಡ ಅನ್ನದಾನ ಪ್ರಭು ಎಂಬ ಹೆಸರು ಪಡೆದಾತ. ಆದ್ದರಿಂದ ಎಲ್ಲಾ ಭಕ್ತರಿಗೂ ಬರುವ ಸೀಸನ್ನಿನಿಂದ ಉಚಿತ ಊಟ ಬಡಿಸುತ್ತೇವೆ ಎಂದರು.
ಈಗಾಗಲೇ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಊಟ ಒದಗಿಸುವುದು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಭಕ್ತರಿಗೆ ಊಟ ಬಡಿಸುವ ಯೋಜನೆ ದೊಡ್ಡ ಪ್ರಮಾಣದ್ದು. ಈಗಾಗಲೇ ಕರ್ನಾಟಕ ಆಂಧ್ರಪ್ರದೇಶ ಮತ್ತು ತಮಿಳು ನಾಡಿನ ಭಕ್ತರು ಅನ್ನದಾನಕ್ಕೆ ಸಾಕಷ್ಟು ಹಣ ನೀಡಿದ್ದಾರೆ. ನೆಲ್ಲೂರು ಮತ್ತು ವಿಜಯವಾಡದ ಕೆಲವು ಭಕ್ತರು ತಲಾ ಒಂದೊಂದು ಲಾರಿ ಲೋಡ್ ಅಕ್ಕಿಯನ್ನು ಅನ್ನದಾನಕ್ಕಾಗಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಭಕ್ತರು ಅನ್ನದಾನಕ್ಕೆ ಮುಂದಾಗುವುದರಲ್ಲಿ ಅನುಮಾನವೇ ಇಲ್ಲ. ಶುಚಿ ಮತ್ತು ರುಚಿ ಎರಡೂ ಕಾಯ್ದುಕೊಂಡು ಹೋಗಲು ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡುತ್ತಿದ್ದೇವೆ ಎಂದು ಬಾಬು ಹೇಳಿದರು.
ಅಷ್ಟೇ ಅಲ್ಲದ ದೇವಾಲಯದ ಮಂಡಳಿಯ ಸದಸ್ಯರು ಮುಂಬಯಿ, ದೆಹಲಿ ಮತ್ತು ಕೋಲ್ಕತಾಗಳಲ್ಲಿ ಪ್ರವಾಸ ನಡೆಸಿ, ಅನ್ನದಾನಕ್ಕಾಗಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದ್ದಾರೆ.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಮುಖಪುಟ
/
ಇವತ್ತು...
ಈ
ಹೊತ್ತು...