ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಶ್ಮೀರ ಕೆನ್ನಾಲಿಗೆಗೆ ಕೊಪ್ಪಳದ ಯೋಧನ ಬಲಿ
ಕೊಪ್ಪಳ : ಜಮ್ಮು ಕಾಶ್ಮೀರ ಕೊಳ್ಳದ ಕೆನ್ನಾಲಿಗೆಗೆ ರಾಜ್ಯದ ಮತ್ತೊಬ್ಬ ಯೋಧ ಬಲಿಯಾಗಿದ್ದು , ಶ್ರೀನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಯಲಬುರ್ಗಾ ತಾಲ್ಲೂಕಿನ ತಾಳಕೇರಿ ಗ್ರಾಮದ ರಾಜ ಮಹಮದ್ ಎನ್ನುವ ಯೋಧ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ವರ್ಷವಷ್ಟೇ ಮದುವೆಯಾಗಿದ್ದ ರಾಜ ಮಹಮದ್ ಅವರ ಮರಣ ಅವರ ಕುಟುಂಬದ ಪಾಲಿಗೆ ಬರ ಸಿಡಿಲು ಎರಗಿದಂತಾಗಿದೆ.
ಶ್ರೀನಗರದಲ್ಲಿ ಸೋಮವಾರ (ನ.11) ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ರಾಜ್ ಮಹಮದ್ ನಿಧರಾಗಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೇ ಸೇನೆಗೆ ಸೇರ್ಪಡೆಯಾಗಿದ್ದ ಅವರು, ಮಿರೆkೂೕರಾಂನಲ್ಲಿ 9 ತಿಂಗಳು ತರಬೇತಿ ಪಡೆದ ನಂತರ ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ
Story first published: Wednesday, November 13, 2002, 5:30 [IST]