ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಡ್ಯ: ರಜೆಗೆ ರಜಾ, ಶಾಲಾ ಕಾಲೇಜು ಪ್ರಾರಂಭ
ಮಂಡ್ಯ : ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜುಗಳು ನ.7 ರ ಗುರುವಾರ ಬಾಗಿಲು ತೆರೆಯುವುದರೊಂದಿಗೆ ಮಂಡ್ಯ ನಗರ ಹೆಚ್ಚೂ ಕಡಿಮೆ ಮಾಮೂಲಿ ಸ್ಥಿತಿಗೆ ಮರಳಿದೆ.
ಈ ನಡುವೆ ಬೆಂಗಳೂರು-ಮೈಸೂರು ನಡುವಿನ ರೈಲು ಸಂಚಾರ ಗುರುವಾರ ಪ್ರಾರಂಭವಾಯಿತಾದರೂ, ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿತ್ತು . ರಸ್ತೆ ಸಂಚಾರ ಸುಗಮವಾಗಿದ್ದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ಸುಗಮವಾಗಿ ಸಂಚರಿಸುತ್ತಿವೆ. ನಿಷೇಧಾಜ್ಞೆಯನ್ನು ತೆರವುಗೊಳಿಸಿರುವುದರಿಂದ ವಾಣಿಜ್ಯ ಚಟುವಟಿಕೆಗಳು ಕೂಡ ನಿಧಾನವಾಗಿ ಕಳೆಯೇರುತ್ತಿವೆ. ಕೃಷ್ಣರಾಜ ಸಾಗರ ಜಲಾಶಯ ಪ್ರದೇಶವನ್ನು ಹೊರತುಪಡಿಸಿದರೆ, ಉಳಿದೆಡೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ
Comments
Story first published: Thursday, November 7, 2002, 5:30 [IST]