ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಿ ಜಯಾ ಬಳಿ ಶ್ರೀಮತಿ ನಾಗಪ್ಪ ಗೌರಿದುಃಖ

By Staff
|
Google Oneindia Kannada News

ಚೆನ್ನೈ :ನರಹಂತಕ ವೀರಪ್ಪನ್‌ ಸೆರೆಯಿಂದ ತಮ್ಮ ಪತಿಯ ಬಿಡುಗಡೆ ನೆರವು ನೀಡುವಂತೆ ಬುಧವಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ನಾಗಪ್ಪ ಅವರ ಪತ್ನಿ ಪರಿಮಳ ನಾಗಪ್ಪ ಮನವಿ ಸಲ್ಲಿಸಿದರು.

ಕುಟುಂಬದ ಸದಸ್ಯರೊಂದಿಗೆ ಬುಧವಾರ (ನ.6) ಜಯಲಲಿತಾ ಅವರನ್ನು ಭೇಟಿ ಮಾಡಿದ ಪರಿಮಳಾ ನಾಗಪ್ಪ , ಮಧುಮೇಹ ರೋಗಿಯಾದ ನಾಗಪ್ಪನವರ ಆರೋಗ್ಯದ ಬಗೆಗಿನ ತಮ್ಮ ಆತಂಕವನ್ನು ತಮಿಳುನಾಡು ಮುಖ್ಯಮಂತ್ರಿಯಲ್ಲಿ ತೋಡಿಕೊಂಡರು.

ನಾಗಪ್ಪ ಅವರ ಬಿಡುಗಡೆಗೆ ಸಹಕರಿಸುವಂತೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳನ್ನು ಕೋರುತ್ತೇವೆ ಎಂದು ಜಯಲಲಿತಾ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಪ್ಪ ಅವರ ಮಗಳು ಭಾವನಾ ತಿಳಿಸಿದರು.

ವೀರಪ್ಪನ್‌ ಸೂಚನೆಯಂತೆ ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವ ರಾಜೂಗೌಡ ಅವರನ್ನು ಸಂಧಾನಕಾರರಾಗಿ ಕಾಡಿಗೆ ಕಳುಹಿಸಲು ಕರ್ನಾಟಕ ಸರ್ಕಾರ ನಿರಾಕರಿಸಿರುವುದು ತಮ್ಮ ಕುಟುಂಬಕ್ಕೆ ಕಳವಳ ಉಂಟು ಮಾಡಿದೆ. ಕೊಳತ್ತೂರು ಮಣಿಯನ್ನಾದರೂ ಸಂಧಾನಕ್ಕೆ ಕಳುಹಿಸುವ ಸರ್ಕಾರದ ಪ್ರಯತ್ನಗಳು ಯಶಸ್ವಿಯಾಗುವ ಬಗ್ಗೆ ತಮ್ಮ ಕುಟುಂಬಕ್ಕೆ ಆಶಾವಾದವಿದೆ ಎಂದು ಎಂದು ಭಾವನಾ ಹೇಳಿದರು.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X