ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಟ್ಟಲಿದೆ ಮಾದೇಗೌಡರ ಕಾವೇರಿ ಸೇನೆ !

By Staff
|
Google Oneindia Kannada News

ಮಂಡ್ಯ : ಜಿಲ್ಲೆಯಲ್ಲಿ 144ನೇ ಸೆಕ್ಷನ್ನಿನ ಅನ್ವಯ ಹೇರಲಾಗಿರುವ ನಿಷೇಧಾಜ್ಞೆಯನ್ನು ತಕ್ಷಣವೇ ತೆಗೆದು ಹಾಕದಿದ್ದರೆ, ಕಾವೇರಿ ಸೇನೆಯನ್ನು ಕಟ್ಟಿ ಉಗ್ರ ಹೋರಾಟ ಮಾಡುವುದಾಗಿ ಕಾವೇರಿ ಚಳವಳಿ ನಾಯಕ ಜಿ.ಮಾದೇಗೌಡ ಎಚ್ಚರಿಸಿದ್ದಾರೆ.

ಸರ್ಕಾರ ಪೊಲೀಸ್‌ ರಾಜ್ಯವನ್ನು ನಿರ್ಮಿಸಿ, ಚಳವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಈ ಮೂಲಕ ರೈತರು ಹೋರಾಟ ಮಾಡುವ ಪ್ರಜಾತಾಂತ್ರಿಕ ಹಕ್ಕನ್ನೂ ಕಸಿದುಕೊಳ್ಳುತ್ತಿದೆ. ಕಾವೇರಿ ಸೇನೆಯನ್ನು ಕಟ್ಟಿ, ಪೊಲೀಸರನ್ನೂ ಮೆಟ್ಟಿ ಹೋರಾಟ ನಡೆಸಲೂ ನಾವು ಸಿದ್ಧ ಎಂದು ಮಾದೇಗೌಡ ಕಿಡಿ ಕಾರಿದರು.

ಮಂಡ್ಯ ಜಿಲ್ಲೆಯ ರೈತರಿಗೆ ಹಾಗೂ ಜಾನುವಾರುಗಳಿಗೆ ಸಾಕಷ್ಟು ನೀರನ್ನು ಒದಗಿಸುವ ವ್ಯವಸ್ಥೆಯನ್ನು ಮುಖ್ಯಮಂತ್ರಿ ಕೃಷ್ಣ ಮಾಡಿದಲ್ಲಿ ಮಾತ್ರ ಹೋರಾಟ ವಾಪಸ್ಸು ಪಡೆಯುತ್ತೇವೆ. ಸಾಕಷ್ಟು ನೀರು ಇದೆ ಎಂದು ರೈತರಿಗೆ ಹುಸಿ ನುಡಿಯುತ್ತಿರುವ ಸರ್ಕಾರದ ಈಗಿನ ನಡೆಯನ್ನು ನಾವು ಖಂಡಿಸುತ್ತೇವೆ. ಅಷ್ಟೇ ಅಲ್ಲ ಜೈಲ್‌ ಭರೋ ಚಳವಳಿ ಮತ್ತೆ ಮುಂದುವರೆಯಲಿದೆ ಎಂದು ಮಾದೇಗೌಡರು ಧಮಕಿ ಹಾಕಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X