ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರತ್ಯೇಕ ರಾಜ್ಯಕ್ಕಾಗಿ ರಕ್ತ ಸಹಿ ಸಂಗ್ರಹ
ಗುಲ್ಬರ್ಗಾ:ರಾಜ್ಯೋತ್ಸವ ಹತ್ತಿರಾಗುತ್ತಿದ್ದಂತೆಯೇ ಉತ್ತರಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವ್ರವಾಗುತ್ತಿದೆ.
ಹೈದರಾಬಾದ್ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಎಂದು ಘೋಷಿಸುವಂತೆ ಒತ್ತಾಯಿಸಿ ವಿವಿಧ ಕ್ಷೇತ್ರಗಳ 1001 ಮಂದಿ ಯುವಕರು ರಕ್ತ ಸಹಿ ಸಂಗ್ರಹ ಚಳವಳಿ ಆರಂಬಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಯುವ ಘಟಕ ಹಮ್ಮಿಕೊಂಡಿರುವ ಈ ಚಳವಳಿ ಸದ್ಯದಲ್ಲೇ ಆರಂಭವಾಗಲಿದೆ. ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಬರೆದ ಮನವಿ ಪತ್ರವನ್ನು ಯುವಕರು ರಕ್ತದಲ್ಲಿ ಸಹಿ ಹಾಕುವ ಮೂಲಕ ಅನುಮೋದಿಸುವರು. ಈ ಪತ್ರವನ್ನು ಕೇಂದ್ರ ಸರಕಾರ ಹಾಗೂ ಹಲವು ರಾಜಕೀಯ ಪಕ್ಷಗಳಿಗೆ ವಿತರಿಸಲಾಗುವುದು ಎಂದು ಯುವ ಘಟಕದ ಅಧ್ಯಕ್ಷ ರಾಜು ಕುಳಗೇರಿ ತಿಳಿಸಿದ್ದಾರೆ.
ಇತ್ತೀಚೆಗೆ ಉಪ ಪ್ರಧಾನಿ ಅಡ್ವಾಣಿ ಉತ್ತರ ಕರ್ನಾಟಕಕ್ಕೆ ಆಗಮಿಸಿದಾಗ ಪ್ರತ್ಯೇಕ ರಾಜ್ಯಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜು ಕುಳಗೇರಿ ದೂರಿದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ
Comments
Story first published: Thursday, October 31, 2002, 5:30 [IST]