ಪ್ರಶಸ್ತಿ ನಿರಾಕರಿಸಿದ ಇಬ್ಬರು ಸಾಧಕರು
ಬೆಂಗಳೂರು: ಉತ್ತಮ ಶಿಕ್ಷಣ ತಜ್ಞ ಎಂದು ಗೌರವಿಸಿ ನೀಡಲಾಗಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಖ್ಯಾತ ಶಿಕ್ಷಣ ತಜ್ಞ ಹಾಗೂ ವಿಚಾರವಾದಿ ಡಾ. ಜಿ. ರಾಮಕೃಷ್ಣ ನಿರಾಕರಿಸಿದ್ದಾರೆ.
ಇಂತಹ ಪ್ರಶಸ್ತಿಯನ್ನು ಸ್ವೀಕರಿಸಲು ಯೋಗ್ಯ ಕೆಲಸವನ್ನು ನಾನೇನೂ ಮಾಡಿಲ್ಲ. ಈ ರೀತಿಯ ಪ್ರಶಸ್ತಿಯನ್ನು ಪಡೆಯಲು ನನಗೆ ತುಂಬಾ ಸಂಕೋಚವಾಗುತ್ತಿದೆ ಎಂದು ಅವರು ಪ್ರಶಸ್ತಿ ನಿರಾಕರಿಸಿ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾವು ಪ್ರಶಸ್ತಿಯನ್ನು ನಿರಾಕರಿಸಿರುವುದನ್ನು ರಾಜ್ಯ ಸರಕಾರ ತಪ್ಪಾಗಿ ಭಾವಿಸಬಾರದು. ಆಯ್ಕೆ ಸಮಿತಿಯೂ ತಮ್ಮನ್ನು ಕ್ಷಮಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಅಕಾಡೆಮಿ
ಪ್ರಶಸ್ತಿ
ನಿರಾಕರಿಸಿದ
ಎಸ್.
ರಘುನಂದನ್
ವೃತ್ತಿ
ನಿ
ರಂಗ
ನಿರ್ದೇಶಕ
ಎಸ್.
ರಘುನಂದನ್
ಕರ್ನಾಟಕ
ನಾಟಕ
ಅಕಾಡೆಮಿ
ಪ್ರಕಟಿಸಿದ್ದ
ಪ್ರಸಕ್ತ
ವರ್ಷದ
ವಾರ್ಷಿಕ
ಪ್ರಶಸ್ತಿಯನ್ನು
ನಿರಾಕರಿಸಿದ್ದಾರೆ.
ತಾವು ಪ್ರಶಸ್ತಿ ನಿರಾಕರಿಸಿರುವ ಬಗ್ಗೆ ನಾಟಕ ಅಕಾಡೆಮಿ ಅಧ್ಯಕ್ಷ ಆರ್. ನಾಗೇಶ್ ಅವರಿಗೆ ಪತ್ರ ಬರೆದು ತಿಳಿಸಿರುವ ರಘುನಂದನ್ ಪ್ರಶಸ್ತಿ ನಿರಾಕರಿಸಿರುವುದಕ್ಕೆ ಯಾವುದೇ ಕಾರಣ ಕೊಟ್ಟಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ