ಮಂಡ್ಯ ಬಂದ್, ಉಪವಾಸ ಸತ್ಯಾಗ್ರಹ ಪ್ರಾರಂಭ
ಮಂಡ್ಯ/ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತರ ಹಿತರಕ್ಷಣ ಸಮಿತಿ ನೀಡಿರುವ ಅನಿರ್ದಿಷ್ಟಾವಧಿ ಬಂದ್ ಬುಧವಾರ (ಅ.30) ಪ್ರಾರಂಭವಾಗಿದ್ದು , ಮಂಡ್ಯ ನಗರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಶಾಲಾ ಕಾಲೇಜುಗಳು, ಸಿನಿಮಾ ಮಂದಿರಗಳು, ಅಂಗಡಿ ಮುಂಗಟ್ಟುಗಳು ಬುಧವಾರ ಮುಚ್ಚಿದ್ದವು. ನವಂಬರ್ 1 ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ, ಕಾವೇರಿ ಚಳವಳಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾಗಿದ್ದಾರೆ. ಮೈಸೂರು- ಬೆಂಗಳೂರು ನಡುವಿನ ರೈಲು ರಸ್ತೆ ಸಾರಿಗೆ ಸಂಪೂರ್ಣ ಸ್ಥಗಿತವಾಗಿದ್ದು , ಸದ್ಯಕ್ಕೆ ಸುಧಾರಿಸುವ ನಿರೀಕ್ಷೆಯಿಲ್ಲ .
ಉಪವಾಸ
ಸತ್ಯಾಗ್ರಹ
ಪ್ರಾರಂಭ
ಮಂಡ್ಯ
ಜಿಲ್ಲೆಯ
ಹಳ್ಳಿ
ಹಳ್ಳಿಗಳಲ್ಲೂ
ರೈತ
ನಾಯಕರು
ಬುಧವಾರದಿಂದ
ಅನಿರ್ದಿಷ್ಟಾವಧಿ
ಉಪವಾಸ
ಸತ್ಯಾಗ್ರಹ
ಪ್ರಾರಂಭಿಸಿದ್ದಾರೆ.
ಮೈಸೂರಿನಲ್ಲಿ
ಶಾಂತಿ
ವಾತಾವರಣ
ಮುಂದುವರಿದಿದ್ದು
,
ನವಂಬರ್
11
ರವರೆಗೆ
ನಿಷೇಧಾಜ್ಞೆ
ವಿಧಿಸಲಾಗಿದೆ.
ಮಂಡ್ಯದಲ್ಲಿ
ಹಿಂಸಾಚಾರ,
ಭಾರೀ
ಮಳೆ
ಮಂಡ್ಯ
ನಗರದಲ್ಲಿ
ಶಾಂತಿಯುತವಾಗಿ
ನಡೆಯುತ್ತಿದ್ದ
ಕಾವೇರಿ
ಚಳವಳಿ
ಬುಧವಾರ
ಹಿಂಸಾರೂಪಕ್ಕೆ
ತಿರುಗಿದ್ದು,
ಉದ್ರಿಕ್ತರ
ಗುಂಪು
ಸರ್ಕಾರಿ
ವಾಹನಗಳಿಗೆ
ಕಲ್ಲು
ತೂರಿದೆ.
ಕೆಲವೆಡೆ
ವಾಹನಗಳಿಗೆ
ಬೆಂಕಿ
ಹಚ್ಚುವ
ಪ್ರಯತ್ನಗಳೂ
ನಡೆದಿವೆ.
ಉದ್ರಿಕ್ತರ
ಗುಂಪನ್ನು
ಚದುರಿಸಲು
ಪೊಲೀಸರು
ಬೆತ್ತ
ಪ್ರಹಾರ
ನಡೆಸಿದರು.
ಇದೇ
ಅವಧಿಯಲ್ಲಿ
ಮಂಡ್ಯ
ನಗರದಲ್ಲಿ
ಸುರಿದ
ಭಾರೀ
ಮಳೆ
ಪ್ರತಿಭಟನೆಯ
ಕಾವನ್ನು
ತಗ್ಗಿಸಿತು.
ಪ್ರಾಧಿಕಾರ
ಸಭೆಗೆ
ದೇವೇಗೌಡ
ಆಗ್ರಹ
ಕಾವೇರಿ
ಪ್ರಾಧಿಕಾರದ
ಸಭೆಯನ್ನು
ತಕ್ಷಣವೇ
ಕರೆಯುವ
ಮೂಲಕ
ನೀರು
ಹಂಚಿಕೆ
ಸೂತ್ರ
ರಚಿಸಬೇಕೆಂದು
ಪ್ರಧಾನಿ
ವಾಜಪೇಯಿ
ಅವರನ್ನು
ಮಾಜಿ
ಪ್ರಧಾನಿ
ಎಚ್.ಡಿ.ದೇವೇಗೌಡ
ಆಗ್ರಹಿಸಿದ್ದಾರೆ.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ