ನಮಗೊಬ್ಬ ಸರಿಯಾದ, ದಿಟ್ಟ ನಾಯಕನಿಲ್ಲ...
*ಕೆ. ತ್ರಿವೇಣಿ ಶ್ರೀನಿವಾಸರಾವ್, ಐಟಾಸ್ಕ, ಇಲಿನಾಯ್
ನಾವು ಕನ್ನಡಿಗರು ಅನಾಥರು !
ಕೊನೆಗೂ ಕರ್ನಾಟಕ ಜಯಲಲಿತ ಹೇಳಿಕೊಟ್ಟ ಸುಳ್ಳನ್ನೆ ಮತ್ತೆ ಮತ್ತೆ ಪಾಲಿಸಲು ಆದೇಶಿಸುತ್ತಿರುವ ಸುಪ್ರೀಂಕೋರ್ಟಿಗೆ ಅನಿವಾರ್ಯವಾಗಿ ತಲೆಬಾಗಿ, ನಮ್ಮ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಯತೊಡಗಿದ ಸಮಾಚಾರ ಪತ್ರಿಕೆಗಳ ಮೂಲಕ ತಿಳಿದು ಬಹಳ ದುಃಖವಾಯಿತು.
ನಾವು ನಿಜವಾಗಿಯೂ ಕನ್ನಡಿಗರು ಅನಾಥರು, ನಮಗೆ ನಮ್ಮ ನೆಲ, ಜಲಗಳ ಮೇಲೆ ಅಭಿಮಾನ, ಗೌರವಗಳಿಲ್ಲ . ಜಯಲಿಲಿತಾ ಅಬ್ಬರದ ಮುಂದೆ ಮಂಡ್ಯದ ರೈತನ ಕೂಗು ದಿಲ್ಲಿ ಗದ್ದುಗೆ ತಲುಪುವುದಿಲ್ಲ . ನಮಗೆ ಸರಿಯಾದ ನಾಯಕರಿಲ್ಲ . ವಾಟಾಳ್ , ಜಾಣಗೆರೆಯಂತವರ ಹೋರಾಟದ ಮೇಲೆ ನಂಬಿಕೆ ಇಲ್ಲ . ಆದರೆ ಸದ್ಯಕ್ಕೆ ಅವರನ್ನೂ ಬಿಟ್ಟರೆ ಬೇರೆ ವಿಧಿಯೇ ಇಲ್ಲ, ರಾಜ್, ವಿಷ್ಣು ರಾಜಕೀಯ ಮಾಡುವುದಿಲ್ಲ . ಒಟ್ಟಿನಲ್ಲಿ ನಮಗೆ ಯಾರೂ ಇಲ್ಲ ಎಂಬ ಅನಾಥ ಭಾವನೆ ಆವರಿಸಿದೆ.
ಚಿಕಾಗೊದಲ್ಲಿ ಈ ಮುಂಜಾನೆ ಕವಿದುಕೊಂಡ ಮಂಜಿನ ವಾತಾವರಣದಲ್ಲಿ ನನ್ನ ಮನಸ್ಸಿನಲ್ಲೂ ಕರಗಲಾರದಂತಹ ದುಗುಡ, ವಿಷಾದಗಳ ಗಾಢ ಮೌನ!!
ಮುಖಪುಟ / ಕಾವೇರಿ ಕನ್ನಡಿ