ಅಂಚೆಯಣ್ಣನ ಮೂಲಕ ದೀಪಾವಳಿ ಸಿಹಿ ಕಳಿಸಿ
ಬೆಂಗಳೂರು : ದೀಪಾವಳಿಗೆ ಉಡುಗೊರೆ ಕಳಿಸುವ ಹರೀಬರಿಯಲ್ಲಿದ್ದೀರಾ; ತಣ್ಣಗಿರಿ. ಯಾಕೆಂದರೆ, ದೀಪಾವಳಿ ಸಿಹಿಯನ್ನು ಶುಭಹಾರೈಕೆ ಪತ್ರದ ಸಹಿತ ನಿಮ್ಮ ನೆಚ್ಚಿನವರ ಮನೆಗೆ ತಲುಪಿಸುವ ವಿಶೇಷ ಸೇವೆಗೆ ಅಂಚೆ ಇಲಾಖೆ ಸಜ್ಜಾಗಿದೆ.
ಅಂಚೆಯಣ್ಣನಿಗೆ ನಿಗದಿತ ದುಡ್ಡು ಕೊಟ್ಟರೆ ಸಾಕು; ಮಿಶ್ರ ಸಿಹಿಗಳ ಡಬ್ಬ ಹಾಗೂ ಒಂದು ಶುಭಕೋರಿಕೆಯ ಪತ್ರ ನೀವು ಬಯಸಿದವರನ್ನು ತಲುಪುತ್ತದೆ. 1 ಕಿಲೋ ಸಿಹಿ ಡಬ್ಬಕ್ಕೆ 151 ರುಪಾಯಿ. ಒಣ ಹಣ್ಣುಗಳ ಒಂದು ಕಿಲೋ ಡಬ್ಬಕ್ಕೆ 321 ರುಪಾಯಿ ಹಾಗೂ 40 ರುಪಾಯಿ ತ್ವರಿತ ಅಂಚೆ ಶುಲ್ಕ ಕಟ್ಟಿದರಾಯಿತು.
ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್, ರಾಜಾಜಿನಗರ, ಸೈನ್ಸ್ ಇನ್ಸ್ಟಿಟ್ಯೂಟ್, ಮಲ್ಲೇಶ್ವರಂ, ವಿಜಯನಗರ, ಫ್ರೇಜರ್ ಟೌನ್, ಆರ್.ಟಿ.ನಗರ, ಮ್ಯೂಸಿಯಂ ರೋಡ್, ಬಸವನಗುಡಿ, ವಿಲ್ಸನ್ ಗಾರ್ಡನ್, ಜಯನಗರ, ಇಂದಿರಾನಗರ- ಈ ಎಲ್ಲಾ ಅಂಚೆ ಕಚೇರಿಗಳಲ್ಲಿ ದೀಪಾವಳಿಯ ವಿಶೇಷ ಉಡುಗೊರೆ ಸೇವೆ ಲಭ್ಯ. ಅಕ್ಟೋಬರ್ 28ರಿಂದ ನೀವು ಸಿಹಿ ಉಡುಗೊರೆಗೆ ಶುಲ್ಕ ಕಟ್ಟಬಹುದು. ದೀಪಾವಳಿ ಮುಗಿಯುವುದರೊಳಗೆ ನೀವು ಬಯಸಿದವರನ್ನು ಸಿಹಿ ತಲುಪುತ್ತದೆ.
ಮೈಸೂರು, ಮಂಗಳೂರು, ಧಾರಾವಾಡ ಮತ್ತು ಬೆಳಗಾವಿ ಜಿಲ್ಲೆಗಳ ಆಯ್ದ ಅಂಚೆ ಕಚೇರಿಗಳಲ್ಲೂ ದೀಪಾವಳಿ ವಿಶೇಷ ಸೇವೆ ಲಭ್ಯವಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...