ಮಣಿಗೆ ಜಾಮೀನು ಮುಂದಿನ ವಾರ ಸಿಗುತ್ತಾ ?
ಬೆಂಗಳೂರು : ನರಹಂತಕ ವೀರಪ್ಪನ್ ಸೆರೆಯಿಂದ ವರನಟ ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಮಿಳು ಚಳವಳಿಗಾರ ಕೊಳತ್ತೂರು ಮಣಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಒಂದು ವಾರ ಮುಂದೂಡಿದೆ.
ಕೇಸ್ ವಿಚಾರಣೆಯನ್ನು ಮಂದಿನ ವಾರಕ್ಕೆ ಮುಂದೂಡುವಂತೆ ಮಣಿ ಅವರ ಕೌನ್ಸೆಲ್ ಟಿ.ಪ್ರಕಾಶ್ ಮಾಡಿಕೊಂಡ ಮನವಿಯನ್ನು ನ್ಯಾಯಮೂರ್ತಿ ರಾಜೇಂದ್ರ ಪ್ರಸಾದ್ ಅಂಗೀಕರಿಸಿದರು.
ಹೈಕೋರ್ಟ್ನಲ್ಲಿ ಎರಡು ಮೊಕದ್ದಮೆ ಹಾಗೂ ಮೈಸೂರಿನ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯನ್ನು ಎದುರಿಸುತ್ತಿರುವ ಕೊಳತ್ತೂರು ಮಣಿ ಪ್ರಸ್ತುತ ಟಾಡಾ ಕಾಯ್ದೆಯಡಿ ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಮಾಜಿ ಸಚಿವ ಎಚ್.ನಾಗಪ್ಪ ಅವರನ್ನು ಬಿಡುಗಡೆ ಮಾಡಲು ಕೊಳತ್ತೂರು ಮಣಿಯನ್ನು ಸಂಧಾನಕ್ಕೆ ಕಳಿಸುವಂತೆ ನರಹಂತಕ ವೀರಪ್ಪನ್ ರಾಜ್ಯ ಸರ್ಕಾರಕ್ಕೆ ಸಂದೇಶ ಕಳಿಸಿದ್ದಾನೆ. ಆದರೆ ಅಪಹರಣ ಪ್ರಕರಣಕ್ಕೆ ಎರಡು ತಿಂಗಳು ತುಂಬಿದರೂ, ಮಣಿ ಜೈಲಿನಲ್ಲಿರುವುದರಿಂದ ಸಂಧಾನ ಪ್ರಕ್ರಿಯೆಗೆ ಈವರೆಗೂ ಚಾಲನೆ ಸಿಕ್ಕಿಲ್ಲ .
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ