ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪೂಜಾ ಸ್ಥಳ ಅಪವಿತ್ರ ವಿರೋಧಿಸಿ ಭಟ್ಕಳ ಬಂದ್
ಬೆಂಗಳೂರು : ಕೋಮು ಸೌಹಾರ್ದತೆಯ ವಿಷಯದಲ್ಲಿ ತೀರಾ ಸೂಕ್ಷ್ಮ ಪರಿಸ್ಥಿತಿ ಹೊಂದಿರುವ ಭಟ್ಕಳದಲ್ಲಿ ಪೂಜಾ ಸ್ಥಳವನ್ನು ಮೈಲಿಗೆ ಮಾಡಿ ಅವಮಾನಿಸಿರುವುದನ್ನು ವಿರೋಧಿಸಿ ಗುರುವಾರ್ (ಅ.24) ಬಂದ್ ಆಚರಿಸಲಾಯಿತು.
ಮಲ ಮೂತ್ರಗಳ ಮೂಲಕ ಪೂಜಾ ಸ್ಥಳದ ಪಾವಿತ್ರ್ಯವನ್ನು ಕೆಡಿಸಿ ಮೈಲಿಗೆ ಮಾಡಿರುವುದರಿಂದ ಭಟ್ಕಳ ನಗರದಲ್ಲಿ ಬಿಗುವಿನ ಪರಿಸ್ಥಿತಿ ತಲೆದೋರಿದೆ. ಬುಧವಾರ ಸಂಜೆ ಪೂಜಾ ಸ್ಥಳ ಮೈಲಿಗೆಯಾಗಿರುವುದು ತಿಳಿದು ಬಂದಿದ್ದು ತಕ್ಷಣವೇ ಪೊಲೀಸರು ನಗರದ ಸೂಕ್ಷ್ಮ ಪ್ರದೇಶಗಳಿಗೆ ಧಾವಿಸಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡರು.
ಹಿರಿಯ ಪೊಲೀಸ್ ಅಧಿಕಾರಿಗಳು ಎರಡು ಕೋಮಿನ ಧಾರ್ಮಿಕ ಮುಖಂಡರೊಡನೆ ಮಾತುಕತೆ ಏರ್ಪಡಿಸಿದರು. ಇದರಿಂದ ಎರಡು ಕೋಮಿನವರ ನಡುವೆ ಘರ್ಷಣೆ ಉಂಟಾಗುವ ಸಂಭವ ತಪ್ಪಿದಂತಾಗಿದೆ. ಈ ದುಷ್ಕೃತ್ಯವನ್ನು ಖಂಡಿಸಿ ಗುರುವಾರ ಬೆಳಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಲ್ಲದೆ, ನಗರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, October 24, 2002, 5:30 [IST]