ಮಿತಿಯಲ್ಲಿ ನೀರು ಬಿಟ್ಟಿದ್ದೇವೆ-ಕೋರ್ಟ್ಗೆ ಪ್ರಮಾಣಪತ್ರ
ನವದೆಹಲಿ : ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ 4 ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದು , ರಾಜ್ಯ ತನ್ನ ಇತಿಮಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಕೇವಲ 42 ಟಿಎಂಸಿ ನೀರಿನ ಸಂಗ್ರಹ ಇದೆ. ತಮಿಳುನಾಡಿನ ಸಾಂಬಾ ಬೆಳೆಗೆ ಜನವರಿ ತಿಂಗಳಲ್ಲಿ ನೀರಿನ ಅಗತ್ಯವಿದ್ದು , ತಮಿಳುನಾಡಿಗೆ ಮಾತ್ರ ಸೀಮಿತವಾದ ಈಶಾನ್ಯ ಮಾರುತಗಳು ತರುವ ಮಳೆ ಸಾಂಬಾ ಬೆಳೆಗೆ ನೆರವಾಗಲಿದೆ ಎಂದು ಬುಧವಾರ (ಅ.23) ಸುಪ್ರಿಂಕೋರ್ಟ್ಗೆ ಸಲ್ಲಿಸಿದ ತನ್ನ ಸಂಕ್ಷಿಪ್ತ ಪ್ರಮಾಣಪತ್ರದಲ್ಲಿ ಸರ್ಕಾರ ತಿಳಿಸಿದೆ.
ಸುಪ್ರಿಂಕೋರ್ಟ್ ಹಾಗೂ ಕಾವೇರಿ ನದಿ ಪ್ರಾಧಿಕಾರದ ಆದೇಶಗಳನ್ನು ಕರ್ನಾಟಕ ಉಲ್ಲಂಘಿಸಿದೆ ಎನ್ನುವ ಆರೋಪದ ಅರ್ಜಿಯ ಮುಂದುವರೆದ ವಿಚಾರಣೆಯನ್ನು ಸುಪ್ರಿಂಕೋರ್ಟ್ನ ನ್ಯಾಯಪೀಠ ಗುರುವಾರ (ಅ.24) ನಡೆಸಲಿದ್ದು , ತೀರ್ಪು ಹೊರಬೀಳುವ ನಿರೀಕ್ಷೆಯೂ ಇದೆ. ಆದರೆ, ನ್ಯಾಯಾಂಗ ನಿಂದನೆ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ಕರ್ನಾಟಕ ಸರ್ಕಾರ 2 ವಾರಗಳ ಗಡುವು ಕೋರಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ