ಸಚಿನ್ ಸ್ಥಾನ ತುಂಬಲು ಶೆವಾಗ್, ಖಂಡಿತ ಸಾಧ್ಯವಿಲ್ಲ !- ಕಪಿಲ್
ಬೆಂಗಳೂರು
:
ದೇಶ-
ಕ್ರಿಕೆಟ್ಟು
:
ಈ
ಪೈಕಿ
ಯಾವುದು
ಮುಖ್ಯ
ಅಂತ
ಕೇಳಿದರೆ
ನಾನು
ದೇಶವನ್ನು
ಆರಿಸಿಕೊಳ್ಳುತ್ತೇನೆ.
ಸದ್ಯದ
ಪರಿಸ್ಥಿತಿಯಲ್ಲಿ
ಪಾಕಿಸ್ತಾನದ
ಜೊತೆ
ಭಾರತ
ಕ್ರಿಕೆಟ್
ಆಡಬಾರದೆಂಬ
ಸರ್ಕಾರದ
ನಿಲುವನ್ನು
ಶತಮಾನದ
ಕ್ರಿಕೆಟಿಗ
ಕಪಿಲ್
ಸಮರ್ಥಿಸಿದ್ದು
ಹೀಗೆ.
ಕೈನೆಟಿಕ್
ಕಂಪನಿಯ
ಹೊಸ
ಮೋಟಾರ್
ಸೈಕಲ್ಲಿನ
ಬ್ರಾಂಡ್
ಅಂಬಾಸಿಡರ್
ಆಗಿರುವ
ಕಪಿಲ್,
ಶುಕ್ರವಾರ
ಹೊಸ
ಬೈಕಿಗೆ
ಮಾರುಕಟ್ಟೆ
ಒದಗಿಸುವ
ಸಲುವಾಗಿ
ಬೆಂಗಳೂರಿಗೆ
ಬಂದಿದ್ದರು.
ಆಗ
ಸುದ್ದಿಗಾರರ
ಜೊತೆ
ಸಹಜವಾಗೇ
ಕ್ರಿಕೆಟ್ಟಿನ
ಮಾತು
ಸಾಗಿತು...
ಅಮೆರಿಕ ಅಥವಾ ಯೂರೋಪಿನಂತೆ ಆಟವೇ ನಮ್ಮ ದೇಶದಲ್ಲಿ ಒಂದು ವೃತ್ತಿಯಲ್ಲ. ಅದೇನಿದ್ದರೂ ಹವ್ಯಾಸ. ವ್ಯಕ್ತಿಯ ಭಾವನೆಗಳಿಗಿಂತ ದೇಶ ಮುಖ್ಯ. ಯಃಕಶ್ಚಿತ್ ಮನರಂಜನೆಯ ಸಲುವಾಗಿ ರಾಜಕೀಯ ಸಂಬಂಧ ಹಳಸಿಹೋಗಿರುವ ರಾಷ್ಟ್ರಗಳ ನಡುವೆ ಕ್ರಿಕೆಟ್ಟಿನಾಟ ನಡೆಯಬೇಕು ಎಂಬುದನ್ನು ನಾನು ಒಪ್ಪುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿದೆ. ಭಾರತ- ಪಾಕಿಸ್ತಾನದ ಸಂಬಂಧ ಬೇಗ ಹಸನಾಗಲಿ. ಆಗ ಎಷ್ಟು ಬೇಕಾದರೂ ಕ್ರಿಕೆಟ್ಟು ಆಡುವುದನ್ನು ನಾನು ಒಪ್ಪುತ್ತೇನೆ.’
ವೀರೇಂದ್ರ
ಶೆವಾಗ್
ಅಭಿನವ
ಸಚಿನ್
ಹೌದೆ?
-
ಈ
ಪ್ರಶ್ನೆಗೆ
ಕಪಿಲ್
ಮುಖದಲ್ಲಿ
ವಿಚಿತ್ರ
ನಗೆ
ಮೂಡಿತು.
‘ಸಚಿನ್
ಮಟ್ಟಕ್ಕೆ
ಶೆವಾಗ್
ಏರುವುದು
ಸುಲಭವಲ್ಲ.
ಶೆವಾಗ್ನ
ಸಚಿನ್ಗೆ
ಹೋಲಿಸುವುದು
ಸುತಾರಾಂ
ತರವಲ್ಲ.
ಸಚಿನ್
ಒಬ್ಬ
ವರ್ಲ್ಡ್
ಕ್ಲಾಸ್
ಆಟಗಾರ.
ಯಾವುದೇ
ಕ್ರಮಾಂಕದಲ್ಲೂ
ಆಟ
ತೋರಬಲ್ಲ
ಛಾತಿಯಿರುವ
ಅಪರೂಪದ
ಪ್ರತಿಭೆ’
ಎಂದ
ಕಪಿಲ್
ಶೆವಾಗ್
ಕಲಿಯಬೇಕಾದ್ದು
ಇನ್ನೂ
ಇದೆ
ಎಂಬುದನ್ನು
ಸೂಚ್ಯವಾಗಿ
ಹೇಳಿದರು.
ವಿಶ್ವ
ಕಪ್
ಯಾರು
ಗೆಲ್ಲುತ್ತಾರೆ?
ಮೀಸೆ
ಮೇಲೆ
ಕೈಯಾಡಿಸುತ್ತಾ
ಕ್ಷಣ
ಕಾಲ
ಚಿಂತಿಸಿದ
ಕಪಿಲ್-
ಆಸ್ಟ್ರೇಲಿಯಾ
ನನ್ನ
ಫೇವರೇಟ್ಸ್
ಎಂದರು.
‘ಭಾರತ
ಕೂಡ
ಕಳೆದ
ಆರೇಳು
ತಿಂಗಳಿಂದ
ಚೆನ್ನಾಗಿ
ಆಡುತ್ತಿದೆ.
ನಮ್ಮ
ತಂಡ
ವಿಶ್ವ
ಕಪ್
ಗೆದ್ದರೆ
ಸಂತೋಷವೇ
ಅಲ್ಲವೇ’
ಅಂತ
ಮತ್ತೆ
ನಕ್ಕರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...