ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು ಸಿನಿಮಾ ತೋರಿದರೆ, ರೀಲನ್ನೇ ಸುಡುತ್ತೇನೆ : ಜಾಣಗೆರೆ

By Staff
|
Google Oneindia Kannada News

ಬೆಂಗಳೂರು : ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ತಮಿಳುನಾಡು ಅನ್ಯಾಯ ಮಾಡಿರುವುದರಿಂದ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಪ್ರದರ್ಶಿಸಕೂಡದು. ಹಾಗೊಂದು ವೇಳೆ ಪ್ರದರ್ಶಿಸಿದರೆ, ಚಿತ್ರದ ರೀಲುಗಳನ್ನೇ ಸುಡುತ್ತೇವೆ ಎಂದು ಕನ್ನಡ ರಕ್ಷಣಾ ವೇದಿಕೆ ಧಮಕಿ ಹಾಕಿದೆ.

ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸರ್ವೋದಯ ಸಂಘ ಬುಧವಾರ ಆಣಸವಾಡಿಯಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ಕಾವೇರಿ ನದಿ ಹಕ್ಕಿಗಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ಜಾಣಗೆರೆ ವೆಂಕಟರಾಮಯ್ಯ ಬಿಸಿಯಾಗಿ ಮಾತಾಡಿದರು. ರಾಜ್ಯದಲ್ಲಿ ತಮಿಳು ಚಾನೆಲ್‌ಗಳ ಪ್ರಸಾರವನ್ನು ರದ್ದು ಪಡಿಸಬೇಕು. ಇಲ್ಲವಾದಲ್ಲಿ ಕೇಬಲ್‌ ಜಾಲದವರ ವಿರುದ್ಧ ನಾವು ಬಂಡೇಳಬೇಕಾಗುತ್ತದೆ. ತಮಿಳು ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಮಾಲೀಕರು ನಮ್ಮ ಮಾತಿಗೆ ಕಿವಿಗೊಡದೆ ಹೋದಲ್ಲಿ ಸಿನಿಮಾ ರೀಲನ್ನು ಸುಟ್ಟು ಹಾಕುತ್ತೇವೆ ಎಂದು ಜಾಣಗೆರೆ ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X