ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ಮಂಗಳೂರಿನವರೆಗೆ ಮಳೆರಾಯನದ್ದೇ ಮಾತು

By Staff
|
Google Oneindia Kannada News

* ದಟ್ಸ್‌ಕನ್ನಡ ಬ್ಯೂರೋ

ಮೋಡಗಳ ಆಟ, ಇಳೆಯಾಡನೆ ವರುಣನ ಜಳಕ; ಆಗಸ್ಟ್‌ ಮಾಹೆಯ ಮಳೆಗಾಲದ ಅನುಭವ ಇದೀಗ ಕರ್ನಾಟಕದ ಬಹುತೇಕ ಭಾಗಗಳಲ್ಲಿ. ನೀವು ಬೆಂಗಳೂರಿಂದ ಮಂಗಳೂರಿಗೆ ಬಸ್ಸಲ್ಲಿ ಕೂತು ಹೊರಟರೆ, ಎಲ್ಲೂ ಇಳಿದು ನಿಲ್ಲುವಂತಿಲ್ಲ. ಎಲ್ಲೆಲ್ಲೂ ಹನಿಯದ್ದೇ ಮಾತು.

ಕಾವೇರಿ ಕಾವನ್ನು ತಣ್ಣಗಾಗಿಸಲು ಮಳೆರಾಯ ಚಿತ್ತೆೈಸಿರುವ ಪರಿ ಹೇಗಿದೆಯೆಂದರೆ, ಚೆನ್ನೈನಿಂದ ಮಂಗಳೂರಿಗೆ ಹೊರಡುವ ರೈಲು ರದ್ದಾಗಿದೆ. ಕೊಡಗಿನ ಭಾಗಮಂಡಲದಲ್ಲಂತೂ ಕಾವೇರಿ ಕಿಲಕಿಲ ಎನ್ನುತ್ತಿದ್ದಾಳೆ. ಬೆಂಗಳೂರಿನಲ್ಲಿ ದೊಡ್ಡ ವಾರಾಂತ್ಯದ ರಜೆಯ ಕೊನೆ ದಿನದ ಮಜೆಯನ್ನು ಅನುಭವಿಸಲು ಆಡುತ್ತಿರುವ ಮೋಡಗಳು ಅಡ್ಡವಾಗಿವೆ. ಬಹುತೇಕರು ಮನೆಯಲ್ಲೇ ವಿಜಯ ದಶಮಿಯ ಬಿಸಿಯಡುಗೆ ಉಂಡು, ಚಾದರ ಸೇರಿಕೊಂಡಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ (ಸೆಂಟಿಮೀಟರುಗಳಲ್ಲಿ )
ಕಾಸರಗೋಡಿನ ಹೊಸದುರ್ಗದಲ್ಲಿ 16
ಮಂಗಳೂರು ವಿಮಾನ ನಿಲ್ದಾಣ ಮತ್ತು ಪಣಂಬೂರಿನಲ್ಲಿ 11
ಪುತ್ತೂರಲ್ಲಿ 6
ಮಂಚಿಕೆರೆ, ಕುಕ್ಕೆ ಸುಬ್ರಮಣ್ಯದಲ್ಲಿ 4
ಮೈಸೂರು, ಮಂತ್ರಾಲಯದಲ್ಲಿ 3
ಹೊನ್ನಾವರ, ಶಿರಸಿ, ಕುಮಟ, ಬೆಳಗಾವಿಯಲ್ಲಿ 2

ಅಂದಹಾಗೆ, ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಹನಿ ಹನಿ ಮಳೆ ಹುಯ್ಯಲಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ , ತಮಿಳರು, ತೆಲುಗರು ಮತ್ತು ಪಾಂಡಿಚೆರಿ ಜನರಿಗೂ ಮಳೆಯ ಭಾಗ್ಯವಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X