ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳ್ನಾಡು ನೈವೇಲಿ ಪ್ರೊಪ್ರೆೃಟರ್ರಲ್ಲ ;ವಿದ್ಯುತ್‌ ತಡೆಯೂ ಸಾಧ್ಯವಿಲ್ಲ

By Staff
|
Google Oneindia Kannada News

ಬೆಂಗಳೂರು : ತಮಿಳುನಾಡು ನೈವೇಲಿ ಅಣು ಸ್ಥಾವರದ ಪ್ರೊಪ್ರೆೃಟರ್‌ ಅಲ್ಲ. ಆದ್ದರಿಂದ ಕರ್ನಾಟಕಕ್ಕೆ ನೈವೇಲಿಯಿಂದ ವಿದ್ಯುತ್‌ ಸರಬರಾಜನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಶುಕ್ರವಾರ (ಅ.11) ಮಾರ್ಮಿಕವಾಗಿ ನುಡಿದಿದ್ದಾರೆ.

ನೈವೇಲಿಯಿಂದ ಕರ್ನಾಟಕಕ್ಕೆ ಸರಬರಾಜಾಗುವ ವಿದ್ಯುತ್ತನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸುತ್ತಿರುವ ತಮಿಳು ಚಿತ್ರೋದ್ಯಮ, ಶನಿವಾರ ಹಮ್ಮಿಕೊಂಡಿರುವ ಧರಣಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ - ತಮಿಳುನಾಡು ನೈವೇಲಿ ಸ್ಥಾವರದ ಪ್ರೊಪ್ರೆೃಟರ್‌ ಅಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅವರು ಮಂಡ್ಯ ಜಿಲ್ಲೆಯ ಗಜ್ಜಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನೈವೇಲಿ ಸ್ಥಾವರ ತಮಿಳುನಾಡಿನ ನಿಯಂತ್ರಣದಲ್ಲಿದೆ ಎಂದು ತಪ್ಪು ಸುದ್ದಿ ಹರಡಲಾಗುತ್ತಿದೆ. ಆದರೆ, ಸ್ಥಾವರ ಕೇಂದ್ರ ಸರ್ಕಾರದ ಹತೋಟಿಯಲ್ಲಿರುವುದರಿಂದ ಕರ್ನಾಟಕಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಕೃಷ್ಣ ಹೇಳಿದರು.

ಷಟಪ್‌ ಜಯಾ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ಪ್ರಚಂಡ ಜಯ ಗಳಿಸಿದ್ದು, ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಬಗ್ಗೆ ದನಿಯೆತ್ತುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನಾದರೂ ಬಾಯಿ ಮುಚ್ಚಬೇಕು ಎಂದು ಕೃಷ್ಣ ಖಾರವಾಗಿ ನುಡಿದರು. ಜಯಾ ಅವರ ಟೀಕೆಗೆ ಮತದಾರರ ನೇರ ಉತ್ತರ ಎಂದು ಚುನಾವಣೆಯ ಗೆಲುವನ್ನು ಕೃಷ್ಣ ವಿಶ್ಲೇಷಿಸಿದರು.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X