ಮೇಘರಾಜನಿಂದ ಧರಣಿ ತಣ್ಣಗೆ, ಪಕ್ಕದೂರಲ್ಲಿ ಸಿನಿಮಾ ಇಬ್ಬಾಗದ ಧಗೆ !
* ದಟ್ಸ್ಕನ್ನಡ ಬ್ಯೂರೋ
ಚನ್ನಪಟ್ಟಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾದಯಾತ್ರೆ ಮೂರನೇ ದಿನಕ್ಕೆ ಮುಂದುವರೆದಂತೆ ಹಬ್ಬದ ವಾತಾವರಣವಿತ್ತು. ಇದಕ್ಕೆ ವರುಣನ ಕೃಪೆಯೂ ಕಾರಣ. ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿನ ಲಘು ವಾಯು ಭಾರ ಕುಸಿತಕ್ಕೆ ಧನ್ಯವಾದಗಳು.
ಪ್ರತಿಭಟನೆಯ ಬೆಂಕಿ ನುಂಗಿಕೊಂಡು ತಣಿದಿದ್ದ ಮೈಸೂರು ಪ್ರಾಂತದ ಧರಣಿಗೆ ಬುಧವಾರ ಮತ್ತು ಗುರುವಾರ ವರುಣನ ಸಿಂಚನ. ಕಾವೇರಿ ಕಾವಲಿ ಮೇಲೆ ಚಿಮುಕಿರುವ ನೀರು ಇನ್ನಷ್ಟು ಧಾರಾಕಾರವಾಗಲಿ ಅನ್ನುವುದು ಇಲ್ಲಿನ ರೈತರ ಮೊರೆ. ಲಘು ವಾಯು ಭಾರ ಕುಸಿದದಿಂದ ಹನಿಗಳು ಹೆಚ್ಚಾಗಿ ಉದುರಿರುವುದೇ ಕಾವೇರಿ ಜಲಾನಯನ ಪ್ರದೇಶ ಮತ್ತು ತಮಿಳುನಾಡು ಕರಾವಳಿ ಪ್ರದೇಶದಲ್ಲಿ. ಇನ್ನೂ ಒಂದೆರಡು ದಿನ ವರುಣನ ಆಗಮನದ ನಿರೀಕ್ಷೆಯಿದೆ ಎನ್ನುತ್ತಿದೆ ಹವಾಮಾನ ಇಲಾಖೆ.
ಕಾವೇರಿ ಕೊಳ್ಳಕ್ಕೆ ವರುಣ ಪಾದ ಬೆಳೆಸಿದರೂ, ಕಿರಿಕ್ಕುಗಳಿಗೇನೂ ಕೊರೆಯಿಲ್ಲ. ಅದರಲ್ಲೂ ತಮಿಳುನಾಡು ಚಿತ್ರೋದ್ಯಮದಲ್ಲಿ ಕಾವೇರಿ ಕಾವು ಧಗಧಗಿಸುತ್ತಿದೆ. ಚಿತ್ರೋದ್ಯಮ ಇಬ್ಭಾಗವಾಗಿಹೋಗಿದೆ ಎಂಬ ಸೊಲ್ಲು ಜೋರಾಗಿದ್ದು, ಮುಖಪುಟ / ಕಾವೇರಿ ಕನ್ನಡಿ