ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣ ಪಾದಯಾತ್ರೆಮೊಟಕು,ಅ.12ರಂದು ಮಂಡ್ಯದಲ್ಲಿ ಮುಕ್ತಾಯ
ಬೆಂಗಳೂರು : ಕಾವೇರಿ ಹೋರಾಟದಲ್ಲಿ ತೊಡಗಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕೈಗೊಂಡಿರುವ ಪಾದಯಾತ್ರೆಅಕ್ಟೋಬರ್ 12ರಂದೇ ಮುಕ್ತಾಯವಾಗಲಿದೆ.
ಅಕ್ಟೋಬರ್ 12ರಂದು ಮಂಡ್ಯದಲ್ಲಿ ಕೃಷ್ಣ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಪಾದಯಾತ್ರೆಗೆ ಮಂಗಳ ಹಾಡಲಿದ್ದಾರೆ. ಅಲ್ಲಿಂದ ಮೈಸೂರಿನ ಕೃಷ್ಣ ರಾಜ ಸಾಗರದವರೆಗೆ ಕಾರಿನಲ್ಲಿ ತೆರಳಿ ಅಲ್ಲಿನ ರೈತರೊಂದಿಗೆ ಮಾತುಕತೆ ನಡೆಸುವುದಾಗಿ ಬುಧವಾರ(ಅ.9) ಬೆಳಗ್ಗೆ ಕೃಷ್ಣ ಪ್ರಕಟಿಸಿದ್ದಾರೆ.
ಶಾಂತಿ ಕಾಪಾಡುವ ದೃಷ್ಟಿಯಿಂದ ಕಾವೇರಿಗಾಗಿ ಕೃಷ್ಣ ಯಾತ್ರೆಯನ್ನು ಕೈಬಿಡುವಂತೆ ಕಾವೇರಿ ಹೋರಾಟ ಸಮಿತಿಯ ಮುಖಂಡ ಮಾದೇಗೌಡರು ಮಂಗಳವಾರ ಮನವಿ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ರಾಮನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಪುಟದ ಹಿರಿಯ ಸಹೋದ್ಯೋಗಿಗಳೊಂದಿಗೆ ಕೃಷ್ಣ ಚರ್ಚಿಸಿದರು. ಬಳಿಕ ಬುಧವಾರ ಬೆಳಗ್ಗೆ ಪಾದಯಾತ್ರೆಯನ್ನು ಮೊಟಕುಗೊಳಿಸುವ ತಮ್ಮ ನಿರ್ಧಾರವನ್ನು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ
Comments
Story first published: Wednesday, October 9, 2002, 5:30 [IST]