ವೀರಪ್ಪನ್ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ ಮೂರನೆ ಕ್ಯಾಸೆಟ್
ಕೊಳ್ಳೇಗಾಲ : ವೀರಪ್ಪನ್ ಮೂರನೆಯ ಕ್ಯಾಸೆಟ್ ಕಳುಹಿಸಿದ್ದು, ಭಾನುವಾರ ಸಂಜೆ ಕಾಮಗೆರೆಯ ಮಾಜಿ ಸಚಿವ ನಾಗಪ್ಪ ಅವರ ಮನೆಯ ಮುಂಭಾಗದಲ್ಲಿರುವ ತೋಟದಲ್ಲಿ ದೊರೆತಿದೆ. ಇದರಿಂದ ಕಾವೇರಿವಿವಾದದ ಗುಂಗಿನಲ್ಲಿ ಮರೆತು ಹೋದ ವೀರಪ್ಪನ್ ಪೀಡೆ ನಾಗಪ್ಪ ಅಪಹರಣ ವಿಷಯಕ್ಕೆ ಮತ್ತೊಮ್ಮೆ ಜೀವ ಬಂದಂತಾಗಿದೆ.
ನಾಗಪ್ಪ ಅವರ ಆಪ್ತ ಕಾರ್ಯದರ್ಶಿ ಎಂ. ಆರ್. ಗಂಗಾಧರ್ ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯ ಭಾನುವಾರ ಸಂಜೆ ಬಿಡುಗಡೆ ಮಾಡಿರುವ ಜಂಟಿ ಮಾಧ್ಯಮ ಹೇಳಿಕೆಯಲ್ಲಿ ಕ್ಯಾಸೆಟ್ ದೊರೆತಿರುವುದಾಗಿ ಪ್ರಕಟಿಸಿದ್ದಾರೆ. ಆದರೆ ಕ್ಯಾಸೆಟ್ನಲ್ಲಿರುವ ವಿವರಗಳನ್ನು ಬಹಿರಂಗಪಡಿಸಿಲ್ಲ.
ನಾಗಪ್ಪ ಅವರ ಪುತ್ರ ಪ್ರೀತನ್ ಈ ಕ್ಯಾಸೆಟ್ನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ. ಬ್ಯಾನರ್ ಒಂದರಲ್ಲಿ ಸುತ್ತಿಟ್ಟಿದ್ದ ಈ ಕ್ಯಾಸೆಟ್ ಜೊತೆಗೆ, ಇದನ್ನು ಪೊಲೀಸರಿಗೇ ತಲುಪಿಸದೇ ನಾಗಪ್ಪ ಮನೆಯವರಿಗೆ ಅಥವಾ ಸರಕಾರಕ್ಕೆ ತಲುಪಿಸಬೇಕು ಎಂಬ ಸೂಚನೆಯನ್ನು ಕನ್ನಡದಲ್ಲಿ ಬರೆಯಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ