ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಲ್ಲಿ ಉಕ್ರೇನ್ ಅಧ್ಯಕ್ಷ : ಇದು ಮಾಹಿತಿ ತಂತ್ರಜ್ಞಾನ ಭೇಟಿ
ಬೆಂಗಳೂರು : ಉಕ್ರೇನ್ ಅಧ್ಯಕ್ಷ ಲಿಯೋನಿಡ್ ಕುಚ್ಮ ಎರಡು ದಿನಗಳ ಭೇಟಿಗಾಗಿ ನಗರಕ್ಕೆ ಶುಕ್ರವಾರ ವಿಶೇಷ ವಿಮಾನದಲ್ಲಿ ಬಂದಿಳಿದರು. ಅವರನ್ನು ಕರ್ನಾಟಕದ ರಾಜ್ಯಪಾಲ ಟಿ.ಎನ್.ಚತುರ್ವೇದಿ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಬರಮಾಡಿಕೊಂಡರು.
ಉನ್ನತ ಮಟ್ಟದ ಸಮಿತಿ ಸಹಿತ ಬಂದ ಕುಚ್ಮ ವಿಮಾನ ಇಳಿದವರೇ ನೇರವಾಗಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಗೆ ತೆರಳಿದರು. ಮಾಹಿತಿ ತಂತ್ರಜ್ಞಾನ ದಿಗ್ಗಜ ಕಂಪನಿಗಳಾದ ವಿಪ್ರೋ ಹಾಗೂ ಇನ್ಫೋಸಿಸ್ಗೂ ಕುಚ್ಮ ಭೇಟಿ ಕೊಡುವರು.
ಶನಿವಾರ ಇಸ್ರೋಗೆ ಭೇಟಿ ನೀಡಿ, ಅಲ್ಲಿನ ವಿಜ್ಞಾನಗಳ ಕುರಿತು ಮಾತಾಡಲಿರುವ ಕುಚ್ಮೋ, ನಂತರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಡೆಟ್ಗೆ ಹೋಗಲಿದ್ದಾರೆ. ನಂತರ ವಿಶೇಷ ವಿಮಾನದಲ್ಲಿ ತವರಿಗೆ ವಾಪಸ್ಸಾಗಲಿದ್ದಾರೆ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
Comments
Story first published: Friday, October 4, 2002, 5:30 [IST]