ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಟ್ಕಾ ನಿಷೇಧ ಪ್ರಶ್ನಿಸಿ ಸಾಗರದ ರೈತರು ಸುಪ್ರಿಂಕೋರ್ಟ್ಗೆ
ಶಿವಮೊಗ್ಗ : ಆರೋಗ್ಯಕ್ಕೆ ಹಾನಿಕರ ಎಂದು ಕೆಲವು ರಾಜ್ಯಗಳು ಗುಟ್ಕಾ ನಿಷೇಧಿಸಿರುವುದನ್ನು ಸಾಗರ ಪ್ರ್ಯಾಂತದ ರೈತರು ಸುಪ್ರಿಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ತಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಅಡಿಕೆ ರೈತರು ನ್ಯಾಯಾಲಯದ ಕಟ್ಟೆ ಹತ್ತಿದ್ದಾರೆ. ಗುಟ್ಕಾ ನಿಷೇಧ ಹಾಗೂ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಕೆಲವು ರಾಜ್ಯಗಳ ವಾದವನ್ನು ಪ್ರಶ್ನಿಸಿ, ರೈತರು ಸುಪ್ರಿಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ರಾಜ್ಯ ಅಡಿಕೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಡಿಕೆ ಬೆಳೆ ಉಳಿಸಿಕೊಳ್ಳಲು ರೈತರು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮುಂದುವರಿಸುವರು. ಹೋರಾಟಕ್ಕಾಗಿ ರೈತರು ಸುಮಾರು 22 ಲಕ್ಷ ರುಪಾಯಿ ಕಾದಿರಿಸಿದ್ದಾರೆ ಎಂದು ಮಂಜುನಾಥಗೌಡ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Thursday, October 3, 2002, 5:30 [IST]