ಮಂಗಳೂರಿನಲ್ಲಿ ಶುಕ್ರವಾರದಿಂದ 2 ದಿನಗಳ ಕ್ಯಾಶೋ ಫೆಸ್ಟಿವಲ್
*ಸದಾಶಿವ ಕೆ.
ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯ ಮತ್ತು ಮಂಗಳೂರು ಗೇರುಬೀಜ ಉತ್ಪಾದಕರ ಸಂಘ ಎರಡು ದಿನಗಳ ಕ್ಯಾಶೋ ಫೆಸ್ಟಿವಲ್ನ್ನು ಸೆಪ್ಟೆಂಬರ್ 27ಮತ್ತು 28ರಂದು ಆಯೋಜಿಸಿದೆ.
ಈ ವಿಷಯವನ್ನು ಕಾರ್ಯಕ್ರಮ ಸಂಯೋಜಕ ಹಾಗೂ ಗೇರುಬೀಜ ಉತ್ಪಾದಕರ ಸಂಘದ ವಾಲ್ಟರ್ ಡಿಸೋಜ ತಿಳಿಸಿದ್ದಾರೆ. ಕ್ಯಾಶೋ ಫೆಸ್ಟಿವೆಲ್ನ್ನು ನಗರದ ಲೇಡೀಸ್ ಕ್ಲಬ್ನಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎ. ಕೆ. ಮೊನ್ನಪ್ಪ ಉದ್ಧಾಟಿಸುವರು. ಭಾರತದ ಗೇರುಬೀಜ ರಫ್ತು ಮಂಡಳಿ ಅಧ್ಯಕ್ಷ ಕೆ. ಕೃಷ್ಣ ಪಿಳ್ಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ದೇಶದಲ್ಲಿ ಹತ್ತನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಗೇರು ಬೀಜದ ಉತ್ಪಾದನೆ ವಾರ್ಷಿಕ 15 ಲಕ್ಷ ಟನ್ ಮೀರಲಿದೆ. ಆದ್ದರಿಂದ ಗೇರುಬೀಜಕ್ಕೆ ಈಗಲೇ ಸೂಕ್ತ ಮಾರುಕಟ್ಟೆಯನ್ನು ದೇಶೀಯವಾಗಿ ಸಂಘಟಿಸಲು ಈ ಕ್ಯಾಶೋವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಈ ಉತ್ಸವದಲ್ಲಿ ಗೇರು ಬೀಜ ಮಾರುಕಟ್ಟೆಯ ಬಗ್ಗೆ ಬೆಳೆಗಾರರಿಗಿರುವ ಅಪನಂಬಿಕೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು ಎಂದು ಡಿ.ಸೋಜ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಗೇರುಬೀಜ ರಫ್ತಿಗೆ ಉತ್ಸಾಹದಾಯಕ ವಾತಾವರಣ ಇಲ್ಲ ಎಂದು ಸಂಘದ ಕಾರ್ಯದರ್ಶಿ ಪ್ರಕಾಶ್ ಕಲ್ಬಾವಿ ಅಭಿಪ್ರಾಯಪಟ್ಟರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಟಿ. ಮಲ್ಲಿಕಾರ್ಜುನಪ್ಪ ಪ್ರಾಕೃತಿಕ ಬೆಳೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉತ್ಸವದ ಮಹತ್ವವಾದುದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...