ರಾಜ್ಯದ ಗುಂಡಾ ಭಟ್ಟ, ನರಸಿಂಹ ಮೂರ್ತಿಗೆ ‘ವೇದ ರತ್ನ’ ಪ್ರಶಸ್ತಿ
ಬೆಂಗಳೂರು : ರಾಜ್ಯದ ವೇದ ವಿದ್ವಾನ್ ಎಸ್. ಪಿ. ಗುಂಡಾ ಭಟ್ಟರು, ಎಲ್. ಎಸ್. ನರಸಿಂಹ ಮೂರ್ತಿ ಸೇರಿದಂತೆ ಏಳು ಮಂದಿ ಸಂಸ್ಕೃತ ವಿದ್ವಾಂಸರಿಗೆ 2001ನೇ ವರ್ಷದ ವೇದರತ್ನ ಪ್ರಶಸ್ತಿಯನ್ನು ಭಾರತೀಯ ವಿದ್ಯಾಭವನ ಪ್ರಕಟಿಸಿದೆ.
ಋಗ್ವೇದ ವಿದ್ವಾನ್ ಎಸ್. ಪಿ. ಗುಂಡಾ ಭಟ್, ರಾಜಮಂಡ್ರಿಯ ರೆಮಲ್ಲ ಸೂರ್ಯ ಪ್ರಕಾಶ ಶಾಸ್ತ್ರಿ(ಕೃಷ್ಣ ಯಜುರ್ವೇದ), ಮಾಗಾಪುರದ ಪುರುಷೋತ್ತಮ್ ಪ್ರಹ್ಲಾದ್ ಅಲಿಯಾಸ್ ನಾನಾ ಶಾಸ್ತ್ರಿ ಮುಲೆ (ಶುಕ್ಲ ಯಜುರ್ವೇದ), ಹರಿದ್ವಾರದ ಡಾ. ರಾಮನಾಥ್ ವೇದಾಲಂಕಾರ್ (ಸಾಮವೇದ), ವೇದ-ಸಂಸ್ಕೃತ ವಿಭಾಗದಲ್ಲಿ ಕೋಲ್ಕತಾದ ಡಾ. ಸೀತಾನಾಥ್ ಗೋಸ್ವಾಮಿ, ಕರ್ನಾಟಕದ ಲಿಂಗದ ಹಳ್ಳಿಯ ಎಲ್. ಎಸ್. ನರಸಿಂಹ ಮೂರ್ತಿ ಹಾಗೂ ಪಾಟ್ನಾದ ಡಾ. ವಿಶ್ವನಾಥ್ ಪ್ರಸಾದ್ ವರ್ಮಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಒಂದು ಲಕ್ಷ ರೂಪಾಯಿ, ಶ್ರೀ ಗುರುಗಂಗೇಶ್ವರಾನಂದಜೀ ಪ್ರತಿಮೆಯನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಗುರುಗಂಗೇಶ್ವರನ ಅನುಯಾಯಿಗಳು ಸ್ಥಾಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...