ಪರಿಶೀಲನಾ ತಂಡದ ವರದಿಯ ಮೇಲೆ ನಿಂತ ರೈತರ ಭವಿಷ್ಯ?
ಬೆಂಗಳೂರು: ರಾಜ್ಯದ ಜಲಾಶಯಗಳನ್ನು ವೀಕ್ಷಿಸಲು ಜಲಾಶಯ ಪರಿಶೀಲನಾ ತಂಡ ಸೆಪ್ಟೆಂಬರ್ 24ರಂದು ರಾಜ್ಯಕ್ಕೆ ಆಗಮಿಸಲಿದೆ. ಅಲ್ಲದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಮಳೆ- ಬೆಳೆ ಪರಿಸ್ಥಿತಿಯನ್ನು ಅಧ್ಯಯನ ನಡೆಸುವ ಹಿನ್ನೆಲೆಯಲ್ಲಿ ಕಾವೇರಿ ಉಸ್ತುವಾರಿ ಸಮಿತಿಯ ಸಭೆಯೂ ಅಂದೇ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಎ. ಕೆ. ಗೋಸ್ವಾಮಿ ಪರಿಶೀಲನಾ ತಂಡದ ನೇತೃತ್ವ ವಹಿಸಲಿದ್ದಾರೆ. ಈ ತಂಡವು ರಾಜ್ಯದ ಮಳೆ ಬೆಳೆಗಳ ಬಗ್ಗೆ ಸರಕಾರದಿಂದ ಮಾಹಿತಿ ಪಡೆದು ನಂತರ ಜಲಾಶಯಗಳಿಗೆ ಭೇಟಿ ನೀಡಲಿದೆ. ಮೆಟ್ಟೂರು ಜಲಾಶಯಕ್ಕೂ ಭೇಟಿ ನೀಡಿ ತಮಿಳುನಾಡಿನ ಕೃಷಿ ಪರಿಸ್ಥಿತಿಯನ್ನೂ ತಂಡ ವೀಕ್ಷಿಸಲಿದೆ. ಸೆ. 24ರ ಮಂಗಳವಾರ ಬೆಳಗ್ಗೆ ನಡೆಯುವ ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕದ ಯಾವ ಜಲಾಶಯಗಳನ್ನು ಭೇಟಿ ಮಾಡಬೇಕು ಎಂಬುದು ನಿರ್ಧಾರವಾಗಲಿದೆ.
ಈ ನಡುವೆ ರಾಜ್ಯದ ಜನತೆಗೆ ಕುಡಿಯುವ ನೀರು ಒದಗಿಸುವುದು ನನ್ನ ಆದ್ಯ ಕರ್ತವ್ಯ ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಘೋಷಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ