ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುರುಸ್ವಾಮಿ ಮಗನ ಓದಿನ ಜವಾಬ್ದಾರಿ ಹೊರಲು ಸೋಮಣ್ಣ ಮುಂದು
ಮೈಸೂರು : ಕಾವೇರಿ ನೀರಿಗಾಗಿ ಪ್ರಾಣಾರ್ಪಣೆ ಮಾಡಿದ ಬೀಚನಹಳ್ಳಿ ಮಂಡಲ ಪಂಚಾಯಿತಿ ಸದಸ್ಯ ಗುರುಸ್ವಾಮಿಯವರ ಮಗನನ್ನು ದತ್ತು ತೆಗೆದುಕೊಂಡು, ಆತನನ್ನು ಓದಿಸುವ ಜವಾಬ್ದಾರಿ ಹೊತ್ತುಕೊಳ್ಳಲು ಶಾಸಕ ವಿ.ಸೋಮಣ್ಣ ಮುಂದಾಗಿದ್ದಾರೆ.
ಏಳನೇ ಇಯತ್ತೆಯಲ್ಲಿ ಓದುತ್ತಿರುವ ಮೃತ ಗುರುಸ್ವಾಮಿಯವರ ಮಗನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ತಾವೇ ಹೊರುವುದಾಗಿ ಸೋಮಣ್ಣ ಶುಕ್ರವಾರ ಹೇಳಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಅವರು ಬೀಚನಹಳ್ಳಿಗೆ ಭೇಟಿ ಕೊಟ್ಟಿದ್ದರು. ಸಂಯುಕ್ತ ಜನತಾದಳದ ಮುಖಂಡ ಪಿ.ಜಿ.ಆರ್. ಸಿಂಧ್ಯ ಕೂಡ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ತಮ್ಮ ಪಕ್ಷದ ವತಿಯಿಂದ 11 ಸಾವಿರ ರುಪಾಯಿ ನೆರವನ್ನು ಕೊಟ್ಟು ಹೋದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, September 21, 2002, 5:30 [IST]