ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆ- ಹಾಗೂ ನವನಗರದ ರಸ್ತೆ ಅಭಿವೃದ್ಧಿಗೆ 6 ಕೋಟಿ ರು

By Staff
|
Google Oneindia Kannada News

ಬೆಂಗಳೂರು : ಮುಳುಗಡೆಯಾಗುತ್ತಿರುವ ಬಾಗಲಕೋಟೆ ನಗರ ಹಾಗೂ ನವನಗರದ ನಡುವಿನ ರಸ್ತೆ ಸಂಪರ್ಕವನ್ನು ಅಭಿವೃದ್ಧಿಗೊಳಿಸಲು ರಾಜ್ಯ ಸರಕಾರವು ಆರು ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೃಷ್ಣಾ ಜಲಭಾಗ್ಯ ನಿಗಮಕ್ಕೆ ಸೂಚಿಸಿದೆ.

ಈ ವಿಷಯವನ್ನು ಸೋಮವಾರ (ಸೆ. 16) ಜಲಸಂಪನ್ಮೂಲ ಸಚಿವ ಎಚ್‌. ಕೆ. ಪಾಟೀಲ್‌ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಾಗಲಕೋಟೆ ನಿರ್ವಸಿತರು ಮನೆಯಿಲ್ಲದೆಯೇ ನವನಗರದಲ್ಲಿ ವಾಸಿಸುತ್ತಿದ್ದಾರೆ. ಇಂತಹ 750 ಕುಟುಂಬಗಳಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಡಲಾಗುವುದು. ಅಲ್ಲದೆ ಬಾಗಲಕೋಟೆಯಲ್ಲಿ ಮುಳುಗಡೆಯಾಗದಿರುವ ಆದರೆ ನಗರದ ಸ್ಥಳಾಂತರದಿಂದಾಗಿ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೂ ಜಾಗವನ್ನು ಕೊಡಲು ಸರಕಾರ ನಿರ್ಧರಿಸಿರುವುದಾಗಿ ಪಾಟೀಲ್‌ ಹೇಳಿದರು.

ನವನಗರದಲ್ಲಿ ವಾಸಿಸುತ್ತಿರುವ ನಿರ್ವಸಿತ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾದ ವರದಿಯಾಂದನ್ನು ಸಲ್ಲಿಸುವಂತೆ ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಸ್‌ ಪಾಟೀಲ್‌ಗೆ ಸೂಚಿಸಲಾಗಿದೆ. ಸಚಿವ ಆರ್‌. ಬಿ. ತಿಮ್ಮಾಪುರ ಅವರು ನವನಗರದಲ್ಲಿ ಜನರ ಕಷ್ಟ ವಿಚಾರಿಸಿಕೊಳ್ಳಲು ವಾರಕ್ಕೊಮ್ಮೆ ಜನತಾ ದರ್ಶನ ಕಾರ್ಯಕ್ರಮ ನಡೆಸುವುದಾಗಿ ಭರವಸೆ ನೀಡಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X