ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರೀಲಿ ಗಣೇಶನ ಮುಳುಗಿಸೋಕೆ ಚಿಕ್ಕ ಕೆರೇನೇ ಇಲ್ವೇ !
ಬಳ್ಳಾರಿ : ತುಂಗಭದ್ರಾ ನಾಲೆಯಲ್ಲಿ ದೊಡ್ಡ ಬಿರುಕಿನ ರಿಪೇರಿ ನಡೆಯುತ್ತಿದ್ದು, ನಾಲೆಯಲ್ಲಿ ನೀರು ಯಾವಾಗ ಹರಿಯುತ್ತದೋ ಗೊತ್ತಿಲ್ಲ. ಅಲ್ಲಿಯವರೆಗೆ 150ಕ್ಕೂ ಹೆಚ್ಚು ದೊಡ್ಡ ಗಣೇಶಗಳಿಗೆ ನಿತ್ಯಪೂಜೆ ನಡೆಯಲೇಬೇಕು.
ಗಣಪನ ವಿಸರ್ಜನೆಗೆ ಬಳ್ಳಾರಿಯ ಜನ ನೆಚ್ಚಿಕೊಂಡಿರುವುದೇ ತುಂಗಭದ್ರಾ ನಾಲೆಯನ್ನು. ಇದನ್ನು ಬಿಟ್ಟು ನೀರಿರುವ ಒಂದೇ ಒಂದು ಬಾವಿ ಇಲ್ಲಿ ತಡಕಾಡಿದರೂ ಸಿಗೋದಿಲ್ಲ.
ನಾಲೆಗೆ ಸದ್ಯದಲ್ಲೇ ನೀರು ಬರುತ್ತದೆ ಅಂತ ನೆಚ್ಚಿಕೊಂಡು ಪ್ರತಿವರ್ಷ ಗಣಪನ ಕೂರಿಸುವವರು ಈ ಬಾರಿಯೂ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಇಟ್ಟರು. ತುಂಗಭದ್ರಾ ನಾಲೆ ಬಿಟ್ಟರೆ ಅಲ್ಲಿಪುರಂ ಮತ್ತು ಮೋಕಾ ಜಲಾಶಯಗಳಲ್ಲಿ ನೀರಿದೆ. ಆದರೆ ಈ ನೀರು ಕುಡಿಯೋಕೆ ಮೂಲಾಧಾರ. ಬಣ್ಣದ ಗಣೇಶ ಮೂರ್ತಿಗಳನ್ನು ಇಲ್ಲಿ ಮುಳುಗಿಸಿದರೆ, ಕುಡಿಯುವ ನೀರಿಗೇ ಕುತ್ತು. ಹೀಗಾಗಿ ತುಂಗಭದ್ರಾ ನಾಲೆಗೆ ನೀರು ಬರುವವರೆಗೆ ಗಣೇಶ ಮೂರ್ತಿಗಳ ವಿಸರ್ಜನೆ ಸಾಧ್ಯವಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, September 13, 2002, 5:30 [IST]