ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಟಿಎಫ್‌ ಹಿನ್ನಡೆ, ವೀರಪ್ಪನ್‌ ತಮಿಳ್ನಾಡು ಅರಣ್ಯಕ್ಕೆ ಪರಾರಿ?

By Staff
|
Google Oneindia Kannada News

ಚಾಮರಾಜನಗರ: ನರಹಂತಕ ವೀರಪ್ಪನ್‌ ಅಡಗಿಕೊಂಡಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಎಸ್‌ಟಿಎಫ್‌ ಯೋಧರು ಕಳೆದ 24 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ವ್ಯರ್ಥವಾಗಿದೆ. ದಿನ್ನ ಹಳ್ಳಿಯನ್ನು ತಲುಪಿದ ಪೊಲೀಸರಿಗೆ ಕಂಡದ್ದು ಅಡುಗೆ ಬೇಯಿಸಿದ ಉರುವಲು, ಟೆಂಟು ಹಾಕಿದ ಗುರುತುಗಳು.

ಮಾಜಿ ಸಚಿವ ನಾಗಪ್ಪ ಅವರ ಜೊತೆಗೇ ವೀರಪ್ಪನ್‌ ತಮಿಳುನಾಡಿನ ಅರಣ್ಯಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಎಸ್‌ಟಿಎಫ್‌ ಪಡೆಯ ಪೊಲೀಸರ ಕೈಯಿಂದ ಸುಮಾರು ಒಂದು ಗಂಟೆಯ ಅಂತರದಲ್ಲಿ ಆತ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕಾತೆಗುಣಿ ಅರಣ್ಯದ ಮೂಲಕ ವೀರಪ್ಪನ್‌ ತಮಿಳುನಾಡಿಗೆ ಪರಾರಿಯಾಗಿರಬಹುದು ಎಂಬ ಶಂಕೆಯಾಂದಿಗೆ ಪೊಲೀಸರು ಮತ್ತೆ ಗುಂಡಾಲ್‌ ಅರಣ್ಯ ಕ್ಯಾಂಪ್‌ಗೆ ವಾಪಸ್ಸಾಗಿದ್ದಾರೆ.

ಕಾರ್ಯಾಚರಣೆ ನಿಲ್ಲಿಸಿ ಎಂಬ ವೀರಪ್ಪನ್‌ ಬೇಡಿಕೆಯನ್ನು ನಿರಾಕರಿಸಿ ಪೊಲೀಸರು ಕಾಡಿಗೆ ನುಗ್ಗಿದ್ದರೂ ಆತನನ್ನು ಪತ್ತೆಹಚ್ಚುವುದು ಸಾಧ್ಯವಾಗದೇ ಇರುವುದರಿಂದ ಕರ್ನಾಟಕ ಎಸ್‌ಟಿಎಫ್‌ ಪಡೆಗೆ ಬಹುದೊಡ್ಡ ಹಿನ್ನಡೆಯಾದಂತಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X