ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಿದರಿಗೆ ಸಪೋರ್ಟ್‌ ಕೊಟ್ಟಿದ್ದಕ್ಕೇ ನಾಗಪ್ಪನ ಹೊತ್ತುಕೊಂಡು ಬಂದೆ’

By Super
|
Google Oneindia Kannada News

ಕಾಮಗೆರೆ : ಶಂಕರ ಬಿದರಿ ಮಾಡಿದ್ದನ್ನೆಲ್ಲಾ ನಾಗಪ್ಪನವರು ಸಂಪೂರ್ಣವಾಗಿ ಬೆಂಬಲಿಸಿದರು. ಅದಕ್ಕೇ ಅವರನ್ನು ಹಿಡಕೊಂಡು ಬಂದಿದ್ದೇನೆ ಎಂದು 30 ನಿಮಿಷಗಳ ಅವಧಿಯ ಕೆಸೆಟ್ಟಿನಲ್ಲಿ ವೀರಪ್ಪನ್‌ ಗುಡುಗಿದ್ದಾನೆ.

ಕೆಸೆಟ್ಟಿನಲ್ಲಿ ನಾಗಪ್ಪ ಮಾತಾಡಿರುವುದು ಕೇವಲ 2 ನಿಮಿಷ. ಉಳಿದ ಭಾಗದಲ್ಲೆಲ್ಲಾ ವೀರಪ್ಪನ್‌ ಹಾರಾಟದ ಮಾತುಗಳೇ ತುಂಬಿವೆ. ಅದರ ಸಾರ ಹೀಗಿದೆ...

  • ನಾಗಪ್ಪನವರ ಮನೆಯ ಗನ್‌ ಮ್ಯಾನ್‌ ಪುಕ್ಕಲನಂತೆ ಓಡಿಹೋದ. ಅವನೇನಾದರೂ ಗುಂಡು ಹಾರಿಸಿದ್ದರೆ, ಎಲ್ಲರನ್ನೂ ಕೊಂದು ಹೋಗುತ್ತಿದ್ದೆ.
  • ನನಗೆ ಬೇಕಿರುವುದು ಹಣವಲ್ಲ. ಸೇಡು ತೀರಿಸಿಕೊಳ್ಳಬೇಕಾಗಿದೆ.
  • ನನ್ನ ತಮ್ಮ ಅರ್ಜುನ್‌ ಸೇರಿದಂತೆ ಅನೇಕ ಅಮಾಯಕರನ್ನು ಕೊಂದು ಹಾಕಿರುವ ಶಂಕರ ಬಿದರಿಗೆ ನಾಗಪ್ಪ ಪೂರ್ಣ ಬೆಂಬಲ ಕೊಟ್ಟಿದ್ದರು. ಅದಕ್ಕೇ ಅವರನ್ನು ಅಪಹರಿಸಿದೆ.
  • ಸಂಧಾನಕ್ಕೆ ಕೊಳತ್ತೂರು ಮಣಿ ಹಾಗೂ ನಲ್ಲೂರು ಮಾರಯ್ಯ ಅವರನ್ನು ಕಳಿಸಿಕೊಡಿ. ನೆಡುಮಾರನ್‌ ಒಳ್ಳೆಯವರು. ರಾಜ್‌ಕುಮಾರ್‌ ಅವರನ್ನು ಬಿಡುಗಡೆ ಮಾಡಲು ನಾನು ಚಿಕ್ಕಾಸೂ ಪಡೆದಿಲ್ಲ.
  • ಸಾಕಷ್ಟು ದುಡ್ಡು ಕೊಟ್ಟು ಪೊಲೀಸ್‌ ಇಲಾಖೆಗೆ ಸೇರಿ, ಲಂಚ ಕೊಳ್ಳೆ ಹೊಡೆಯುವ ಪೊಲೀಸರಿಗೆ ನಾನು ಹಣ ಇಸಿದುಕೊಂಡೆ ಎಂದು ಆರೋಪಿಸುವ ನೈತಿಕ ಹಕ್ಕಿಲ್ಲ....

ಶಂಕರ ಬಿದರಿಯವರನ್ನು ಅವಾಚ್ಯ ಶಬ್ದಗಳಿಂದ ಎಕ್ಕಾ ಮಕ್ಕಾ ಜರೆದಿರುವ ವೀರಪ್ಪನ್‌ ಕ್ರುದ್ಧನಾಗಿರುವುದಂತೂ ದಿಟ. ಕೆಸೆಟ್ಟು ಬೆಂಗಳೂರು ಬಳಿಯ ಬಿಡದಿಯಲ್ಲಿ ಪೋಸ್ಟಾಗಿರುವುದು ಪೊಲೀಸರಿಗೆ ಇನ್ನೊಂದು ಸವಾಲಾಗಿದೆ. ಬಿಡದಿ ಸುತ್ತ ಮುತ್ತ ಕೂಡ ಪೊಲೀಸ್‌ ನಿಗಾ ಇಡಲಾಗಿದೆ.(ಇನ್ಫೋ ವಾರ್ತೆ)

English summary
I abducted Nagappa because he did support Shankar Bidari : Veerappan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X