ಮಂಡ್ಯ ಜಿಲ್ಲೆ ಬಂದ್ಯಶಸ್ವಿ : ಜಯಾ ಪ್ರತಿಕೃತಿ ದಹನ,ಶ್ರಾದ್ಧದೂಟ
ಬೆಂಗಳೂರು : ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಿದ್ದ ಮಂಡ್ಯ ಜಿಲ್ಲಾ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ತಮಿಳುನಾಡಿಗೆ ಪ್ರತಿದಿನವೂ 1.25 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿರುವ ಸುಪ್ರಿಂಕೋರ್ಟ್ ತೀರ್ಪನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತರ ಹಿತಾಸಕ್ತಿ ಸಮಿತಿ ಶನಿವಾರ (ಸೆ.7) ಮಂಡ್ಯ ಜಿಲ್ಲಾ ಬಂದ್ಗೆ ಕರೆ ನೀಡಿತ್ತು .
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಪ್ರತಿಭಟನೆಕಾರರು ರಸ್ತೆ ತಡೆ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹನ ನಡೆಸಿದರು. ಪ್ರತಿಭಟನಕಾರರು ರಸ್ತೆ ತಡೆ ನಡೆಸಿದ್ದರಿಂದ, ಬೆಂಗಳೂರು ಹಾಗೂ ಮೈಸೂರು ನಡುವಿನ ಸಂಚಾರ ಅಸ್ತವ್ಯಸ್ತಗೊಂಡಿದೆ.
ರಸ್ತೆಗಿಳಿದು
ಪ್ರತಿಭಟನೆ,
ಶ್ರಾದ್ಧದೂಟ
ಮಂಡ್ಯ
ಜಿಲ್ಲೆಯ
ಬೂದನೂರು
ಗ್ರಾಮದಲ್ಲಿ
ರಸ್ತೆಗಿಳಿದು
ಪ್ರತಿಭಟಿಸಿದ
ಮಹಿಳೆಯರು
ತಮಿಳುನಾಡಿಗೆ
ನೀರು
ಹರಿಸುವುದನ್ನು
ತಕ್ಷಣದಿಂದಲೇ
ನಿಲ್ಲಿಸುವಂತೆ
ಒತ್ತಾಯಿಸಿದರು.
ಇಂಡವಾಳ, ದಸರಗುಡ್ಡ, ಚಿನಕುರಳಿ ಮುಂತಾದ ಗ್ರಾಮಗಳಲ್ಲೂ ರೈತರು ಹಾಗೂ ವಿದ್ಯಾರ್ಥಿಗಳು ರಸ್ತೆ ತಡೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹನ ನಡೆಸಿದರು. ಕೆಲವು ಗ್ರಾಮಗಳಲ್ಲಿ ರಸ್ತೆಗಳಲ್ಲಿ ಶ್ರಾದ್ಧದೂಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...