ಮಂಡ್ಯ : ಬಸ್ಸು-ರೈಲು ತಡೆ, ಶನಿವಾರ ಬಂದ್, ಶಾಲಾ ಕಾಲೇಜಿಗೆ ರಜೆ
ಮಂಡ್ಯ : ರಸ್ತೆ ಹಾಗೂ ರೈಲು ಸಂಚಾರಕ್ಕೆ ಅಡ್ಡಿ ಪಡಿಸುವ ಮೂಲಕ ಮಂಡ್ಯ ಜಿಲ್ಲೆಯ ರೈತರು ಮತ್ತು ವಿದ್ಯಾರ್ಥಿಗಳು, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರು ಹಾಗೂ ಮೈಸೂರು ನಡುವಿನ ರಸ್ತೆಯನ್ನು ಶುಕ್ರವಾರ (ಸೆ.6) ಮುಚ್ಚುವ ಮೂಲಕ ಕೆಲ ಸಮಯ ರಸ್ತೆ ಸಂಪರ್ಕವನ್ನು ಪ್ರತಿಬಂಧಿಸುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾದರು. ಟಿಪ್ಪು ಎಕ್ಸ್ಪ್ರೆಸ್ ಹಾಗೂ ಶತಾಬ್ಧಿ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೂ ಅಡ್ಡಿ ಮಾಡಿದ ಪ್ರತಿಭಟನಾಕಾರರು ಸುಮಾರು 30 ನಿಮಿಷಗಳ ಕಾಲ ರೈಲು ಸಂಚಾರವನ್ನು ತಡೆಹಿಡಿದರು.
ಕೆರಗೋಡು, ಕೊಪ್ಪ, ಕಿಲ್ಲಾರ ಮುಂತಾದೆಡೆಯೂ ಶುಕ್ರವಾರ ಬಂದ್ ನಡೆದಿರುವ ಬಗ್ಗೆ ವರದಿಗಳು ಬಂದಿವೆ.
ಮಂಡ್ಯ ಜಿಲ್ಲಾ ರೈತರ ಹಿತಾಸಕ್ತಿ ಸಮಿತಿಯ ಆಶ್ರಯದಲ್ಲಿ , ಮಾಜಿ ಸಂಸದ ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಸೆ.7 ರ ಶನಿವಾರ ಮಂಡ್ಯ ಬಂದ್ಗೆ ಸಮಿತಿ ಕರೆ ನೀಡಿದೆ.
ಮದ್ದೂರಲ್ಲಿ
ಧರಣಿ
ಕಾಂಗ್ರೆಸ್
ಸಂಸದ
ಹಾಗೂ
ಜನಪ್ರಿಯ
ಸಿನಿಮಾ
ನಟ
ಅಂಬರೀಷ್
ನೇತೃತ್ವದಲ್ಲಿ
ಧರಣಿ
ನಡೆಸಿದ
ರೈತರ
ಸಮೂಹ,
ತಕ್ಷಣವೇ
ಕಾವೇರಿ
ಪ್ರಾಧಿಕಾರದ
ಸಭೆ
ಕರೆಯುವಂತೆ
ಪ್ರಧಾನಿ
ವಾಜಪೇಯಿ
ಅವರನ್ನು
ಒತ್ತಾಯಿಸಿತು.
ಕಿರುಗಾವಲು
ಕ್ಷೇತ್ರದ
ಶಾಸಕ
ಡಿ.ಸಿ.ತಮ್ಮಣ್ಣ
,
ಶ್ರೀರಂಗಪಟ್ಟಣ
ಶಾಸಕಿ
ಪಾರ್ವತಮ್ಮ
ಶ್ರೀಕಂಠಯ್ಯ,
ಮಂಡ್ಯ
ಜಿಲ್ಲಾ
ಕಾಂಗ್ರೆಸ್
ಅಧ್ಯಕ್ಷ
ಎಲ್.ಆರ್.ಶಿವರಾಮೇಗೌಡ
ಧರಣಿಯಲ್ಲಿ
ಭಾಗವಹಿಸಿದ್ದರು.
ಶಾಲಾ
ಕಾಲೇಜಿಗೆ
ರಜೆ
ತಮಿಳುನಾಡಿಗೆ
ನೀರು
ಬಿಡುವುದರ
ವಿರುದ್ಧ
ನಡೆಯುತ್ತಿರುವ
ವ್ಯಾಪಕ
ಪ್ರತಿಭಟನೆ
ಹಾಗೂ
ಸೆ.7
ರಂದು
ಮಂಡ್ಯ
ಬಂದ್ಗೆ
ಕರೆ
ನೀಡಿರುವ
ಹಿನ್ನೆಲೆಯಲ್ಲಿ
ಸೆ.7
ರ
ಶನಿವಾರ
ಜಿಲ್ಲೆಯ
ಶಾಲಾ
ಕಾಲೇಜುಗಳಿಗೆ
ರಜೆ
ಜಿಲ್ಲಾಡಳಿತರಜೆ
ಘೋಷಿಸಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...