ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲುವಾಸಿಗಳನ್ನು ಸಂಧಾನಕ್ಕೆ ಕಳುಹಿಸಲು ಸಾಧ್ಯವಿಲ್ಲ- ಕೃಷ್ಣ

By Staff
|
Google Oneindia Kannada News

ನವದೆಹಲಿ: ಜೈಲಿನಲ್ಲಿರುವವರನ್ನು ಯಾವುದೇ ಕಾರಣಕ್ಕೂ ವೀರಪ್ಪನ್‌ ಬಳಿಗೆ ಸಂಧಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಪ್ರಧಾನಿ ವಾಜಪೇಯಿ ಅವರ ಅಮೆರಿಕಾ ಪ್ರವಾಸಕ್ಕೆ ಮುನ್ನವೇ (ಸೆಪ್ಟೆಂಬರ್‌ 9ರಿಂದ ) ಕಾವೇರಿ ನದಿ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಕೃಷ್ಣ ಪಟ್ಟು. ಇದಕ್ಕೆ ಶತಾಯ ಗತಾಯ ಪ್ರಯತ್ನಿಸುತ್ತಿರುವ ಅವರು ಶುಕ್ರವಾರ ಸುದ್ದಿಗಾರೊಡನೆ ವೀರಪ್ಪನ್‌ ಸಂಧಾನದ ವಿಷಯ ಕುರಿತು ಮಾತಾಡಿದರು.

ವೀರಪ್ಪನ್‌ ಎರಡನೇ ಕೆಸೆಟ್ಟನ್ನು ಕಳುಹಿಸಿದ್ದು, ಬಂಧಿತರಾಗಿರುವ ತಮಿಳು ರಾಷ್ಟ್ರೀಯಚಳವಳಿ ನಾಯಕ ಪಿ.ನೆಡುಮಾರನ್‌ ಹಾಗೂ ಕೊಳತ್ತೂರು ಮಣಿಯನ್ನು ಬಿಡುಗಡೆ ಮಾಡುವಂತೆ ಕೇಳಿದ್ದಾನೆ. ಕೊಳತ್ತೂರು ಮಣಿಯನ್ನು ಸಂಧಾನಕ್ಕೆ ಕಳಿಸಿಕೊಡಿ ಅಂತಲೂ ಹೇಳಿದ್ದಾನೆ.

ಇಂಥಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಬಂಧಿತರನ್ನು ಸಂಧಾನಕ್ಕೆ ಕಳುಹಿಸುವುದರ ಮಾತೇ ಇಲ್ಲ ಎಂದು ಕೃಷ್ಣ ಖಂಡಾತುಂಡಾಗಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X