ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್‌ ಪರದೆಯ ಹಿಂದೆ ಅವಿತುಕೊಂಡಿರುವ ವೀರಪ್ಪನ್‌ ಹೆಂಡತಿ

By Staff
|
Google Oneindia Kannada News

ಕೊಯಮತ್ತೂರು : ವೀರಪ್ಪನ್‌ ಹೆಂಡತಿ ಮುತ್ತುಲಕ್ಷ್ಮಿ ಈಗೇನು ಮಾಡ್ತಿದಾಳೆ?ಉತ್ತರ- ಎಸ್‌ಟಿಎಫ್‌ಗೆ ವೀರಪ್ಪನ್‌ ಶಿಕಾರಿಯಲ್ಲಿ ಸಹಾಯ ಮಾಡುತ್ತಿದ್ದರೂ ಸುದ್ದಿಗಾರರ ಕೈಗೆ ಸಿಕ್ಕುತ್ತಿಲ್ಲ.

ಎರಡು ವರ್ಷಗಳ ಹಿಂದೆ ವರನಟ ರಾಜ್‌ಕುಮಾರ್‌ ಅಪಹರಣವಾದಾಗ ಇದೇ ಮುತ್ತುಲಕ್ಷ್ಮಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದಳು. ಆದರೆ ಈಗ ಆಕೆಯ ತಂಟೆಗೆ ಹೋದವರು ಕಡಿಮೆಯೇ. ಯಾಕೆ ?

ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್‌) ಯ ಎಡಿಜಿಪಿ ಕೆ.ನಟರಾಜನ್‌ ಹೇಳುತ್ತಾರೆ : ಆಕೆ ಸೇಲಂನಲ್ಲಿದ್ದಾಳೆ. ಅವಳ ಮೊದಲ ಮಗಳು ಚೆನ್ನೈನಲ್ಲಿ 9ನೇ ಇಯತ್ತೆಯಲ್ಲಿ ಓದುತ್ತಿದ್ದಾಳೆ. 9 ವರ್ಷದ ಎರಡನೇ ಮಗಳೂ ಸ್ಕೂಲಿಗೆ ಹೋಗುತ್ತಿದ್ದಾಳೆ. ಎಲ್ಲಿದ್ದಾಳೆ ಅಂತ ಮಾತ್ರ ಹೇಳೋಕಾಗಲ್ಲ. ಆಕೆಗೇ ತನ್ನ ಗಂಡ ಎಲ್ಲಿರುತ್ತಾನೆ ಅನ್ನೋದು ಗೊತ್ತಿರಲ್ಲ. ಹಾಗಿದ್ದೂ ಪೊಲೀಸರಿಗೆ ತನ್ನ ಕೈಲಾದ ಸಹಾಯ ಮಾಡಿದ್ದಾಳೆ.

ನಂಬಲರ್ಹ ಮೂಲಗಳ ಪ್ರಕಾರ ವೀರಪ್ಪನ್‌ ಬಲಗೈ ಬಂಟ ಸೇತುಕುಳಿ ಗೋವಿಂದನ್‌ ಮತ್ತು ಸಹಚರ ಚಂದ್ರ ಗೌಂಡರ್‌ ಬಂಧನಕ್ಕೆ ನೆರವಾಗಿರುವುದೇ ಮುತ್ತುಲಕ್ಷ್ಮಿ. ಈ ಇಬ್ಬರಿಂದ 50 ಲಕ್ಷ ರುಪಾಯಿಯನ್ನು ವಶ ಪಡಿಸಿಕೊಳ್ಳಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X