ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಗಭದ್ರಾ ಕಾಲುವೆ ಗೋಡೆ ಕುಸಿದು ಕೋಟ್ಯಂತರ ರೂಪಾಯಿ ನಷ್ಟ

By Staff
|
Google Oneindia Kannada News

ಹೊಸಪೇಟೆ: ತುಂಗಭದ್ರ ಜಲಾಶಯದ ಬಲದಂಡೆ ಕಾಲುವೆಯ ಗೋಡೆ ಕುಸಿದು ಬಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ಸೋಮವಾರ ಅಪರಾತ್ರಿಯಲ್ಲಿ ತುಂಗಭದ್ರ ಕಾಲುವೆಯ ಗೋಡೆ ಕುಸಿದಿದ್ದು, ಕಮಲಾಪುರ ಕೆರೆ ಒಡೆದು ಹೋಗಿದೆ. ಜಲಾಶಯದ ಇತಿಹಾಸದಲ್ಲಿಯೇ ಇಂತಹ ದುರಂತ ಸಂಭವಿಸುತ್ತಿರುವುದು ಇದೇ ಮೊದಲು. ಕಾಲುವೆ ಕಟ್ಟಿ 35 ವರ್ಷಗಳು ಸಂದಿವೆ. ನಂತರ ಸೈಡ್‌ವಾಲ್‌ಗಳು ಶಿಥಿಲವಾಗುತ್ತಿರುವ ಬಗ್ಗೆ ಗಮನ ಹರಿಸದೇ ಇರುವುದೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗಿದೆ. ಕಾಲುವೆ ಮೇಲ್ಮಟ್ಟದ 14 / 850 ಹಾಗೂ 900 ಮೈಲಿಯ ನಡುವೆ ಈ ದುರಂತ ಸಂಭವಿಸಿದೆ.

ಈ ಕಾಲುವೆಯಲ್ಲಿ ಹರಿಯುತ್ತಿದ್ದ 3371 ಕ್ಯೂಸೆಕ್ಸ್‌ ನೀರು ಪಕ್ಕದ ಗದ್ದೆಗಳಿಗೆ ನುಗ್ಗಿದೆ. ಕಾಲುವೆ ನೀರು ಪುರಾತನವಾದ ಅಗಲಬತ್ತಿಕೆರೆ ಕಟ್ಟೆಯನ್ನು ಸೀಳಿಕೊಂಡು ಹರಿಯುತ್ತಿರುವುದರಿಂದ ಲಕ್ಷಾಂತರ ರೂಪಾಯಿಯ ಬೆಳೆ ನಾಶವಾಗಿದೆ. ಈ ಮೊದಲೇ ಕಮಲಾಪುರ ಕಾಲುವೆ ತುಂಬಿತ್ತು. ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದ ಕಾರಣ ನೀರು ಕೆರೆಯ ಏರಿಯನ್ನು ಕೊಚ್ಚಿಕೊಂಡು ಆ ಪ್ರದೇಶದ ಹೊಲ ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡಿದೆ.

ಒಡೆದು ಹೋದ ಪ್ರದೇಶದಲ್ಲಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಮರಳು ಚೀಲ ಪೇರಿಸಿ ಗೋಡೆ ನಿರ್ಮಾಣ ಕಾರ್ಯ ಸಾಗಿದೆ. ಕಮಲಾಪುರ ಕೆರೆಯ ನೀರು ಅಲ್ಲಿನ, ಮನೆ ರಸ್ತೆಗಳಿಗೆಲ್ಲ ನುಗ್ಗಿ ಹರಿದಾಡುತ್ತಿರುವುದರಿಂದ ಕಂಪ್ಲಿ ಪ್ರದೇಶಕ್ಕೆ ಸಂಪರ್ಕವಿಲ್ಲದ ವಾಹನ ಪಾಪಿ ನಾಯಕನ ಹಳ್ಳಿಯಿಂದ ಸಂಚರಿಸುತ್ತಿವೆ.

(ಇನ್ಫೋ ವಾರ್ತೆ)

ಕಾವೇರಿ ಕಾವು
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X