ನೀರಿಗೆ ಬೆಂಕಿಯ ಭಯ : ಕಾವೇರಿ ಬೆಲ್ಟ್ನಲ್ಲಿಪೊಲೀಸ್ ಕಟ್ಟೆಚ್ಚರ
ಬೆಂಗಳೂರು : ದಿನಂಪ್ರತಿ 1.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರಿಂಕೋರ್ಟ್ ಆದೇಶ ಕೊಟ್ಟಿರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಹಿಂಸಾಚಾರ ಭುಗಿಲೇಳುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ.
ಮಂಡ್ಯ, ಮೈಸೂರು, ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಈ ವಿಷಯದಲ್ಲಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಯಾವುದೇ ಕ್ಷಣ ಪ್ರತಿಭಟನೆ, ಹಿಂಸಾಚಾರ ಸ್ಫೋಟಿಸುವ ಸಂಭವವಿದ್ದು, ಕಟ್ಟೆಚ್ಚರದಿಂದ ಇರುವಂತೆ ಆಯಾ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ಗಳಿಗೆ ಸೂಚಿಸಲಾಗಿದೆ.
ತಾನು ಕೊಟ್ಟಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಸುಪ್ರಿಂಕೋರ್ಟ್ಗೆ ಕರ್ನಾಟಕ ಸರ್ಕಾರ ಅರ್ಜಿ ಹಾಕಬೇಕು ಮತ್ತು ಕಾವೇರಿ ನದಿ ಪ್ರಾಧಿಕಾರದ ಸಭೆಯನ್ನು ನಿಗದಿತ ಸೆ.15ಕ್ಕೆ ಮುಂಚೆಯೇ ನಡೆಸುವಂತೆ ಕೋರಬೇಕೆಂದು ವಿವಿಧ ಪಕ್ಷಗಳ ಮುಖಂಡರು ಸಲಹೆ ಕೊಟ್ಟಿದ್ದಾರೆ.
ಸರ್ವ ಪಕ್ಷಗಳ ತುರ್ತು ಸಭೆ ಈಗ ನಡೆಯುತ್ತಿದ್ದು, ಅದರ ಫಲಶೃತಿಯತ್ತ ಜನತೆಯ ದೃಷ್ಟಿ ನೆಟ್ಟಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...