ಬರಗ್ರಸ್ತರಿಗೆ ಮುಲಾಮು :127ಕೋಟಿ ರು.ಬೆಳೆ ಸಾಲದ ಬಡ್ಡಿ ಮನ್ನಾ
ಬೆಂಗಳೂರು : ಬರ ಪೀಡಿತ ರೈತರ ಕಣ್ಣೀರೊರೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 127 ಕೋಟಿ ರುಪಾಯಿಯಷ್ಟು ಬೆಳೆ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ನಿರ್ಧರಿಸಿದೆ.
ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು 975 ಕೋಟಿ ರುಪಾಯಿ ಬೆಳೆ ಸಾಲವನ್ನು ಪಡೆದಿದ್ದಾರೆ. ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಈ ಬ್ಯಾಂಕುಗಳಿಗೆ ಲಿಖಿತ ಆದೇಶ ಕೊಡಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಕೈಕೊಟ್ಟ ಮಳೆಯಿಂದ ಖಾರಿಫ್ ಬೆಳೆ ಹಾಳಾಗಿದೆ. ರೈತರು ಕಂಗಾಲಾಗಿದ್ದಾರೆ. ಅವರು ಪಡೆದಿರುವ ಸಾಲದ ಬಡ್ಡಿ ಮನ್ನಾ ಮಾಡುವುದರಿಂದ ಆಗಲಿರುವ ವಿತ್ತ ಕೊರತೆಯನ್ನು ಭರಿಸಲು, ಈ ಸಹಕಾರಿ ಬ್ಯಾಂಕುಗಳಿಗೆ ಸಾಲ ಕೊಟ್ಟಿರುವ ನಬಾರ್ಡ್ಗೆ ಕರ್ನಾಟಕ ಸರ್ಕಾರ 63 ಕೋಟಿ ರುಪಾಯಿ ಕೊಡಲಿದೆ. ಉಳಿದ ಹಣಕ್ಕಾಗಿ ಕೇಂದ್ರ ಸರ್ಕಾರದ ಸಹಾಯ ಕೋರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
127 ಕೋಟಿ ರುಪಾಯಿಯಷ್ಟು ದೊಡ್ಡ ಮೊತ್ತದ ಬೆಳೆ ಸಾಲ ಬಡ್ಡಿಯನ್ನು ರಾಜ್ಯ ಸರ್ಕಾರ ಮನ್ನಾ ಮಾಡುತ್ತಿರುವುದು ಇದೇ ಮೊದಲು. 1980ರಲ್ಲಿ ಜನತಾ ಪಾರ್ಟಿ ಸರ್ಕಾರವು ಕೇಂದ್ರ ಸರ್ಕಾರ ಮತ್ತು ನಬಾರ್ಡ್ನ ವಿರೋಧದ ನಡುವೆಯೂ 83 ಕೋಟಿ ರುಪಾಯಿಯಷ್ಟು ಬೆಳೆ ಸಾಲದ ಬಡ್ಡಿಯನ್ನು ಮನ್ನಾ ಮಾಡಿತ್ತು ಎಂದರು.
ಅಂದಹಾಗೆ, ಎಲ್ಲಾ ಒಣ ಮತ್ತು ತೇವ ಪ್ರದೇಶದ ರೈತರ ಬೆಳೆ ಸಾಲಕ್ಕೆ ಈ ಬಡ್ಡಿ ಮನ್ನಾ ಅನ್ವಯಿಸುತ್ತದೆ.
ಬರ
ಪರಿಹಾರಕ್ಕೆ
ಎಲ್ಲಾ
ಸಚಿವರ
ತಿಂಗಳ
ಪಗಾರ
ಬರ
ಪರಿಹಾರ
ಕಾಮಗಾರಿಗಾಗಿ
ಪ್ರತಿಯಾಬ್ಬ
ಸಚಿವರೂ
ತಮ್ಮ
ಒಂದು
ತಿಂಗಳ
ಸಂಬಳವನ್ನು
ಕೊಡಬೇಕೆಂದು
ಬುಧವಾರ
ಸಂಪುಟ
ಸಭೆಯಲ್ಲಿ
ನಿರ್ಧರಿಸಿರುವುದಾಗಿ
ವಾರ್ತಾ
ಸಚಿವ
ಕಾಗೋಡು
ತಿಮ್ಮಪ್ಪ
ಹೇಳಿದರು.
ಕಾಂಗ್ರೆಸ್ನ ಎಲ್ಲಾ ಶಾಸಕರೂ ಇದೇ ರೀತಿ ನೆರವು ಕೊಡಬಹುದಾಗಿದೆ. ಬರ ಕಾಮಗಾರಿಗಾಗಿ ತಮ್ಮ ಒಂದು ದಿನದ ಸಂಬಳ ಕೊಡುವಂತೆ ಎಲ್ಲಾ ಸರ್ಕಾರಿ ನೌಕರರಿಗೆ ಮನವಿ ಮಾಡುವುದಾಗಿ ತಿಳಿಸಿದರು.
(ಪಿಟಿಐ)
ಮುಖಪುಟ / ಕೃಷ್ಣ ಗಾರುಡಿ