ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಟ್ಟು ಬಿಟ್ಟುಕೊಡದ ಕೃಷ್ಣ , ಪೂರ್ಣಪೀಠಕ್ಕೆ ಮೇಲ್ಮನವಿ ಸಂಭವ

By Staff
|
Google Oneindia Kannada News

ಬೆಂಗಳೂರು : ಸರ್ವ ಪಕ್ಷಗಳ ಸಭೆಯೇನೋ ಮುಗಿಯಿತು. ಆದರೆ ಅದರ ಫಲಶೃತಿ ಕುರಿತು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮುಗುಮ್ಮಾದರೇ ವಿನಃ ಏನೂ ಹೇಳಲಿಲ್ಲ.

ಬುಧವಾರ ಮಧ್ಯಾಹ್ನ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಸಚಿವ ಸಂಪುಟ ಸಭೆಯ ಮುಂದಿಡಲಾಗುವುದು. ಅಲ್ಲಿಯವರೆಗೆ ಯಾವ ತೀರ್ಮಾನವನ್ನೂ ಹೇಳಲಾರೆ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದರು.

ಕೇಂದ್ರ ಜಲ ಆಯೋಗದ ವರದಿ ಹುಸಿ : ಕಾವೇರಿ ಜಲಾನಯನ ಪ್ರದೇಶಕ್ಕೆ 7 ಸಾವಿರ ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ. ಇದು ಶುದ್ಧ ಸುಳ್ಳು. ಹರಿದು ಬರುತ್ತಿರುವುದು ಕೇವಲ 3400 ಕ್ಯೂಸೆಕ್ಸ್‌. ಜಲ ಆಯೋಗದ ಅಂಕಿ- ಅಂಶ ವಾಸ್ತವಕ್ಕೆ ದೂರವಾದುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಹೇಳಿದರು.

ಸರ್ವ ಪಕ್ಷಗಳ ಸಭೆಗೆ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಪ್ರಿಂಕೋರ್ಟ್‌ನ ಆದೇಶ ಕುರಿತು ಅದೇ ಕೋರ್ಟಿನ ಪೂರ್ಣಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಬೇಕೆಂದು ನಿರ್ಧರಿಸಲಾಯಿತು. ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಯುವವರೆಗೆ ತಮಿಳುನಾಡಿಗೆ ದಿನಂಪ್ರತಿ 1.25 ಟಿಎಂಸಿ ನೀರನ್ನು ಕರ್ನಾಟಕ ಬಿಡಲಿದೆಯೇ ಎಂಬ ವಿಷಯ ಇನ್ನೂ ಪ್ರಶ್ನೆಯಾಗೇ ಉಳಿದಿದೆ.

(ಪಿಟಿಐ/ ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X