ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆರದಿದ್ದರೂ ಪೊರೆದ ತಾಯಿ ಮಗನ ಬಿಡುಗಡೆಗೆ ಮೊರೆಯಿಡುತ್ತಿದ್ದಾಳೆ

By Staff
|
Google Oneindia Kannada News

ಕಾಮಗೆರೆ: ಎಂಬತ್ತಾರರ ಇಳಿವಯಸ್ಸಲ್ಲೂ ಪಾರ್ವತಮ್ಮ ಅನ್ನ- ನೀರು ಬಿಟ್ಟು ಮಗ ಬೇಗ ಬಿಡುಗಡೆಯಾಗಲಿ ಅಂತ ಮಲೆ ಮಹದೇಶ್ವರನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ !

ಕಾಡುಗಳ್ಳ ವೀರಪ್ಪನ್‌ ಕಪಿಮುಷ್ಟಿಯಲ್ಲಿರುವ ಮಾಜಿ ಸಚಿವ ಎಚ್‌.ನಾಗಪ್ಪನವರ ತಾಯಿ ಈಕೆ. ನಾಗಪ್ಪನವರಿಗಿನ್ನೂ 2 ವರ್ಷ ಆಗಿದ್ದಾಗ ಹೆತ್ತಮ್ಮ ಮಹದೇವಮ್ಮನವರನ್ನು ಕಳಕೊಂಡರು. ತಂದೆ ಹುಚ್ಚಪ್ಪ ಆಗ ಮದುವೆಯಾದದ್ದು ಪಾರ್ವತಮ್ಮನವರನ್ನು. ನಾಗಪ್ಪನವರನ್ನು ಮುದ್ದಾಗಿ ಬೆಳೆಸಿದ ಪಾರ್ವತಮ್ಮ ಈಗ ಕಣ್ಣೀರಿಡುತ್ತಿದ್ದಾರೆ.

‘ನನ್ನ ಮಗ ಯಾರಿಗೂ ಅನ್ಯಾಯ ಮಾಡಿಲ್ಲ. ಮಲೆ ಮಾದೇಶ್ವರ ಸ್ವಾಮಿ ಅವನ್ನ ಬೇಗ ಬಿಡುಗಡೆ ಮಾಡಿಸುತ್ತಾನೆ’ ಅನ್ನುತ್ತಾ ಕಣ್ಣಲ್ಲಿ ನೀರೂರುವ ಈಕೆಗೆ ಮೊಮ್ಮಕ್ಕಳೇ ಸಮಾಧಾನ ಹೇಳುತ್ತಿದ್ದಾರೆ. ಊಟ ಬಿಟ್ಟ ಅಜ್ಜಿಗೆ ತುತ್ತೂಡಿಸಲು ಮುಂದಾಗುತ್ತಾರೆ.

ಪಾರ್ವತಮ್ಮ ಮಾತಾಡುತ್ತಿದ್ದಾರೆ...
ಇದೇ ವರ್ಷ ಏಪ್ರಿಲ್‌ ತಿಂಗಳಲ್ಲಿ ಗಂಡನ್ನ ಕಳಕೊಂಡೆ. ಈಗ ಮಗನ್ನ ವೀರಪ್ಪನ್‌ ಹೊತ್ತಿಕೊಂಡು ಹೋಗಿದ್ದಾನೆ. ನನ್ನ ಮಗನ್ನೂ ವೀರಪ್ಪನ್‌ ಹೊತ್ತುಕೊಂಡು ಹೋಗಬಹುದು ಅನ್ನೋ ಮಾತು ಕೇಳಿ ಹುಷಾರಾಗಿರು ಮಗ, ಸಂಜೆ ಹೊತ್ತು ಹೊರಕ್ಕೆ ಹೋಗಬೇಡ ಅಂತ ಹೇಳಿದ್ದೆ. ರಾಜ್‌ಕುಮಾರ್‌ ಅಂಥವರನ್ನೇ ಅವನು ಬಿಡುಗಡೆ ಮಾಡಿದಾನಮ್ಮ. ಇನ್ನು ನಂಗೆ ಭಯ ಇಲ್ಲ ಅಂತ ಹೇಳ್ತಿದ್ದ. ಆದರೆ ನೋಡಿ, ಏನಾಯ್ತು...

ನೂರು ವರ್ಷಗಳಷ್ಟು ಹಳೆಯದಾದ ಮನೆಯಲ್ಲಿ ಮೊಮ್ಮಕ್ಕಳ ಸಾಂತ್ವನದ ನಡುವೆ ಪಾರ್ವತಮ್ಮ ಮಲೆ ಮಹದೇಶ್ವರ ಧ್ಯಾನದಲ್ಲೇ ಇದ್ದಾರೆ. ಬಲವಂತ ಮಾಡಿದರೂ ಊಟ ತಿನ್ನುತ್ತಿಲ್ಲ ; ಮಗನ ಬಿಡುಗಡೆಯ ದಾರಿಯನ್ನೇ ನೋಡುತ್ತಿದ್ದಾರೆ !

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X