ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ. 7ರಂದು ದಾವಣಗೆರೆಯಲ್ಲಿ ಬಾರ್ಕೂರ ಬಂಗಾರಿ ಯಕ್ಷಗಾನ
ದಾವಣಗೆರೆ: ಚಿತ್ರದುರ್ಗ- ದಾವಣಗೆರೆಯ ಬಂಟರ ಸಂಘವು ಸೆಪ್ಟೆಂಬರ್ ಏಳರಂದು ದಾವಣಗೆರೆ ನಗರದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಕನ್ನಡ ಮತ್ತು ಸಂಸವಿಭಾಗ, ನವಜ್ಯೋತಿ ಕ್ಲಬ್ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಲಿದೆ. ದಾವಣಗೆರೆಯ ಗೌರಮ್ಮ ನರಹರಿ ಶೇಟ್ ಹಾಲ್ನಲ್ಲಿ ರಾತ್ರಿ 10 ಗಂಟೆಗೆ ಯಕ್ಷಗಾನ ಆರಂಭವಾಗಲಿದೆ. ಉಡುಪಿಯ ಮಹಾಗಣಪತಿ ಯಕ್ಷಗಾನ ಮಂಡಲಿ ಮತ್ತಿರರು ಯಕ್ಷಗಾನ ಕಾರ್ಯಕ್ರಮದ ಪ್ರಸ್ತುತಪಡಿಸಲಿದ್ದಾರೆ.
ಬಾರ್ಕೂರ ಬಂಗಾರಿ ಎಂಬ ಯಕ್ಷಗಾನ ಪ್ರಸಂಗವನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಚಾರ್ಲಿ ಚಾಪ್ಲಿನ್ ಎಂದೇ ಜನಪ್ರಿಯರಾಗಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷರಂಗ ಸೀತಾರಾಮ್ಕುಮಾರ್ ಬಾರ್ಕೂರ ಬಂಗಾರಿ ಯಕ್ಷಪ್ರಸಂಗದಲ್ಲಿ ಮುಖ್ಯಪಾತ್ರಧಾರಿಗಳಾಗಿ ಭಾಗವಹಿಸಲಿದ್ದಾರೆ.
ಇರ್ಬೈಲು ಆನಂದ ಶೆಟ್ಟಿ, ಕೋಡಿ ವಿಶ್ವನಾಥ ಗಾಣಿಗ ಮತ್ತು ಕೋಟ ಸುರೇಶ ಮತ್ತಿತರು ಈ ಯಕ್ಷಗಾನದಲ್ಲಿ ಪಾತ್ರಧಾರಿಗಳಾಗಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Sunday, September 1, 2002, 5:30 [IST]