ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಗೆ ದಾಖಲಾದ ನಾಡಿನ ಹಿರಿಯ ರಂಗಕರ್ಮಿ ಬಿ.ವಿ.ಕಾರಂತ

By Staff
|
Google Oneindia Kannada News

ಬೆಂಗಳೂರು : ನಾಡಿನ ಹಿರಿಯ ರಂಗಕರ್ಮಿ ಬಿ. ವಿ. ಕಾರಂತ ಅವರ ಆರೋಗ್ಯ ಸ್ಥಿತಿ ಮತ್ತೆ ವಿಷಮಿಸಿದ್ದು, ಅವರು ನಗರದ ಖಾಸಗಿ ಆಸ್ಪತ್ರೆಯಾಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಂತರ ಆರೋಗ್ಯ ಸ್ಥಿತಿ ಮಂಗಳವಾರ (ಆ.27) ಸಂಜೆ ಕೊಂಚ ಏರುಪೇರಾದ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಬುಧವಾರ ಅವರ ದೇಹ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗಿನ ಸುಧಾರಣೆ ಕಂಡು ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಾರಂತರು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.

ಬಿ.ವಿ.ಕಾರಂತರು ವೈದ್ಯರ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಅವರಿಗೆ ಪ್ರಜ್ಞೆ ಮರುಕಳಿಸಿದ್ದು, ಕುಶಲ ವಿಚಾರಿಸಲು ಬಂದವರನ್ನು ಕಣ್ಣಲ್ಲೇ ಮಾತಾಡಿಸುತ್ತಿದ್ದಾರೆ. ಬುಧವಾರ ಕಾರಂತರ ಹಲವಾರು ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಜಡ್ಡುಗಟ್ಟಿದ ರಂಗಭೂಮಿಗೆ ಸಂಚಲನೆಯನ್ನು ಮೂಡಿಸಿದ ಕೀರ್ತಿ ಕಾರಂತರಿಗೆ ಸಲ್ಲುತ್ತದೆ. ರಂಗ ಸಂಗೀತದಲ್ಲಿ ಹಲವು ಹೊಸ ಯಶಸ್ವೀ ಪ್ರಯೋಗಗಳನ್ನು ನಡೆಸಿದ ಕಾರಂತರು, ಸಿನಿಮಾ ಸಂಗೀತದಲ್ಲೂ ಯಶಸ್ಸು ಪಡೆದದ್ದುಂಟು. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಂತರು ಬೇಗ ಚೇತರಿಸಿಕೊಳ್ಳಲಿ ಎಂಬುದು ಅವರ ನೂರಾರು ಅಭಿಮಾನಿಗಳು ಹಾರೈಕೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X